22.9 C
Bengaluru
Saturday, July 6, 2024

ಕನ್ನಡ ರಾಜ್ಯೋತ್ಸವ ಶುಭಾಶಯ ಹೇಳಲು ಈ ಸಂದೇಶಗಳನ್ನು ಬಳಸಿ

#Use these #Messages #wish #kannadarajjotsava

ಬೆಂಗಳೂರು: ಕನ್ನಡ ರಾಜ್ಯೋತ್ಸವ. ಕನ್ನಡಿಗರೆಲ್ಲರ ಸಂಭ್ರಮದ ಹಬ್ಬ.ನವೆಂಬರ್ 1 ಬಂತೆಂದರೆ ಕರುನಾಡಿನ ತುಂಬಾ ಸಂಭ್ರಮ ಮನೆ ಮಾಡುತ್ತದೆ.ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನವೆಂಬರ್​ 1 ಎಂದು ನಿಮ್ಮ ಆತ್ಮೀಯರಿಗೆ ಕನ್ನಡ ರಾಜ್ಯೋತ್ಸವದ ವಿಶ್​ ಮಾಡಲು ಸಂದೇಶಗಳು ಹೀಗಿವೆ

* ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ..

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

*ಸ್ವಚ್ಛವಾಗಿ ಮಾತಾಡಲು ಕಲಿಸಿದ, ಸ್ವಚ್ಛಂದವಾಗಿ ವಿಹರಿಸಲು ಗಂಧದಗುಡಿ ನೀಡಿರುವ ತಾಯಿ ಕನ್ನಡಾಂಬೆಗೆ ವಂದನೆಗಳು.ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

*ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ -ಕುವೆಂಪು

*ಕನ್ನಡಾಂಬೆಯ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

*ಈ ಪುಣ್ಯನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

*ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

*ಮಾತು ಕಲಿಸಿದ, ಮನಸ್ಸನ್ನು ತೆರೆದಿಡಲು ಕಲಿಸಿದ ಮಾತೃಭಾಷೆಯ, ಬದುಕನ್ನು ಕಲಿಸಿದ ಮಾತೃಭೂಮಿಯ ಹಬ್ಬವಿಂದು.. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

*ಮಾತೃಭಾಷೆಯ ಮಮತೆಯ ಮಕ್ಕಳಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

*ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Related News

spot_img

Revenue Alerts

spot_img

News

spot_img