![](https://revenuefacts.com/wp-content/uploads/2023/11/karnataka-rajyostava.webp)
#Use these #Messages #wish #kannadarajjotsava
ಬೆಂಗಳೂರು: ಕನ್ನಡ ರಾಜ್ಯೋತ್ಸವ. ಕನ್ನಡಿಗರೆಲ್ಲರ ಸಂಭ್ರಮದ ಹಬ್ಬ.ನವೆಂಬರ್ 1 ಬಂತೆಂದರೆ ಕರುನಾಡಿನ ತುಂಬಾ ಸಂಭ್ರಮ ಮನೆ ಮಾಡುತ್ತದೆ.ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನವೆಂಬರ್ 1 ಎಂದು ನಿಮ್ಮ ಆತ್ಮೀಯರಿಗೆ ಕನ್ನಡ ರಾಜ್ಯೋತ್ಸವದ ವಿಶ್ ಮಾಡಲು ಸಂದೇಶಗಳು ಹೀಗಿವೆ
* ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ..
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
*ಸ್ವಚ್ಛವಾಗಿ ಮಾತಾಡಲು ಕಲಿಸಿದ, ಸ್ವಚ್ಛಂದವಾಗಿ ವಿಹರಿಸಲು ಗಂಧದಗುಡಿ ನೀಡಿರುವ ತಾಯಿ ಕನ್ನಡಾಂಬೆಗೆ ವಂದನೆಗಳು.ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
*ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ -ಕುವೆಂಪು
*ಕನ್ನಡಾಂಬೆಯ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
*ಈ ಪುಣ್ಯನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
*ಕನ್ನಡ ಪ್ರೀತಿ ಮೆರೆವ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
*ಮಾತು ಕಲಿಸಿದ, ಮನಸ್ಸನ್ನು ತೆರೆದಿಡಲು ಕಲಿಸಿದ ಮಾತೃಭಾಷೆಯ, ಬದುಕನ್ನು ಕಲಿಸಿದ ಮಾತೃಭೂಮಿಯ ಹಬ್ಬವಿಂದು.. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
*ಮಾತೃಭಾಷೆಯ ಮಮತೆಯ ಮಕ್ಕಳಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
*ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು