28 C
Bengaluru
Friday, July 5, 2024

ಬಿಎಂಟಿಸಿ ಡೈವರ್ ಗಳಿಗೆ ನೀತಿ ಪಾಠ ಮಾಡುತ್ತಿರುವ ಪೊಲೀಸರು..!

Killer BMTC accident deaths in Bengaluru

ಬೆಂಗಳೂರು: ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾಮಾನ್ಯ ವರ್ಗದ ಜನರು ಬಿಎಂಟಿಸಿಯಲ್ಲೆ ಓಡಾಡುತ್ತಾರೆ. ಅದರಲ್ಲೂ ಶಕ್ತಿ ಯೋಜನೆ ಜಾರಿಯ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಇದ್ದರು ಸಹ ಸುಮಾರು ಜನ ಪ್ರಯಾಣಿಕರು ಬಿಎಂಟಿಸಿ ಯಲ್ಲೇ ಸಂಚರಿಸುತ್ತಾರೆ.

BMTC ಯಿಂದ ಹೆಚ್ಚಾಯ್ತಾ ಟ್ರಾಫಿಕ್…!

ಇತ್ತೀಚಿಗೆ ಬಿಎಂಟಿಸಿ ಡೈವರ್ , ಕಂಡೆಕ್ಟರ್ ಗಳ ಮೇಲೆ ಗಂಭೀರವಾದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ಶಕ್ತಿ ಯೋಜನೆ ಜಾರಿ ಯಾದ ನಂತರ ಬಸ್ ಡೈವರ್ ಸರಿಯಾಗಿ ನಿಲ್ದಾಣದಲ್ಲಿ ಬಸ್ಸ್ ನಿಲ್ಲಿಸುವುದಿಲ್ಲ. ಕಂಡೆಕ್ಟರ್ ಸರಿಯಾಗಿ ಟಿಕೆಟ್ ಕೊಡದೆ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಬೆಂಗಳೂರಿನ ಎಲ್ಲಾ ನಗರಗಳಲ್ಲೂ ಬಿಎಂಟಿಸಿ ಬಸ್ ಸಂಚರಿಸುತ್ತದು ಟ್ರಾಫ್ರಿಕ್ ಹೆಚ್ಚಾಗುತ್ತದೆ . ದ್ವಿಚಕ್ರ ವಾಹನ ಸವಾರರಂತು ಬಿಎಂಟಿಸಿ ಅವರ ಮೇಲೆ ಕೆಂಡಾಮಂಡಲ ವಾಗುತ್ತಾರೆ. ಬಿಎಂಟಿಸಿಯರಿಗೆ ಡೈವರ್ ಗಳು ಸರಿಯಾಗಿ ಡೈವ್ ಮಾಡಲ್ಲಾ , ರ್ಯಾಸ್ ಡೈವ್ ಮಾಡ್ತಾರೆ ಇದರಿಂದ ಆಕ್ಸಿಡೆಂಟ್ ಗಳು ಹೆಚ್ಚಾಗುತ್ತಿವೆ ಎಂದು ಬಿಎಂಟಿಸಿ ಯವರ ಮೇಲೆ ಆರೋಪಗಳು ಕೇಳಿ ಬರುತ್ತಿದ್ದ ಇನ್ನೆಲೆ ಪೊಲೀಸ್ ಸ್ಟೇಶನ್ ಮಟ್ಟಲೇರುತ್ತಿರುವ ಸರ್ವಾಜನಿಕರು.

BMTC ಡೈವರ್ ಗಳಿಗೆ ಸಂಚಾರಿ ಪೊಲೀಸರಿಂದ ಪಾಠ…!

ಬೆಂಗಳೂರಿನ ಬಿಎಂಟಿಸಿ ಪೊಲೀಸರ ಮೊರೆ ಹೋಗಿದ್ದಾರೆ. ಬಿಎಂಟಿಸಿ ಎಂದರೆ ಸಾಕು ಸಾರ್ವಜನಿಕರ ತಲೆಯಲ್ಲಿ ಅವರು ಒಂದು ಕೆಟ್ಟ ಹುಳು ಎಂದು ಬಿಂಬಿಸಿದ್ದಾರೆ ಅಲ್ಲದೆ ಮರ್ಯಾದೆ ಕೊಡದೆ ವರ್ತಿಸುವ ಮೃಗಗಳು ಎಂದು ಹೇಳುತ್ತಾರೆ. ಪ್ರತಿ ತಿಂಗಳೂ ಬಿಎಂಟಿಸಿ ಗೆ ಒಂದಲ್ಲಾ ಒಂದು ರೀತಿಯ ಆಘಾತವಾಗುತ್ತದೆ. ಇದಕ್ಕೆಲ್ಲ ಫುಲ್ ಸ್ಟಾಪ್ ಇಡಬೇಕೆಂದು ನಿರ್ಧರಿಸಿದ್ದು, ಎಲ್ಲಾ BMTC ಡೈವರ್ ಗಳಿಗೆ ನುರಿತ ರಿಂದ ತರಬೆತಿ ಕೊಡಿಸಲು ಮುಂದಾಗಿದ್ದಾರೆ.

BMTC ಡೈವರ್ ಗಳಿಗೆ ಸಂಚಾರಿ ಪೊಲೀಸರು ಪಾಠ ಮಾಡಲಿದ್ದಾರೆ. ಡೈರ್ ಗಳು ಹೇಗೆ ಬಸ್ ಚಲಾಹಿಸಬೇಕು , ಸಿಗ್ನಲ್ ಸ್ಟಾಪ್ ಆದ ನಂತರ ಹೇಗೆ ಬಸ್ ಚಲಾಯಿಸಬೇಕು, ಯಾವ ಸೈಡ್ ಹೋದರೆ ಉತ್ತಮ, ಬಸ್ಸು ನಿಲ್ದಾಣದಲ್ಲೇ ಬಸ್ಸ್ ನಿಲ್ಲಿಸಬೇಂಕೆದು ಇನ್ನು ಹಲವಾರು ನೀತಿ ಪಾಠಗಳನ್ನು ಪ್ರತಿದಿನ ೫೦ ಜನ BMTC ಡೈವರ್ ಗಳಿಗೆ ಹೇಳಿ ಕೊಡಲಾಗಿತ್ತಿದೆ.

ಚೈತನ್ಯ, ‌ರೆವಿನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img