21.1 C
Bengaluru
Monday, July 8, 2024

ಭೂ ಅತಿಕ್ರಮಣ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು..?

ಬೆಂಗಳೂರು, ಜ. 30 : ಸ್ವಂತ ಮನೆಯನ್ನು ಖರೀದಿಸುವುದು ಪ್ರತಿಯೊಬ್ಬರ ಕನಸು. ಅದು ಹೂಡಿಕೆ ಎಂದಾಗಲೀ, ಅಥವಾ ವಾಸಕ್ಕಾಗಲಿ ಭೂಮಿ ಖರೀದಿ ಮಾಡುವುದು ಸುಲಭದ ಮಾತಲ್ಲ. ಹೀಗಿರುವಾಗ ಭೂಮಿ ಖರೀದಿ ಮಾಡುವಾಗ ಸಾಕಷ್ಟು ಎಚ್ಚರವನ್ನು ವಹಿಸಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಭೂ ಅತಿಕ್ರಮಣಕ್ಕೆ ಸಿಲುಕುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಈಗಾಗಲೇ ನ್ಯಾಯಾಲಯದಲ್ಲಿ ಸಾಕಷ್ಟು ಅತಿಕ್ರಮಣ ಪ್ರಕರಣಗಳು ಬಾಕಿ ಇವೆ. ಹಾಗಾಗಿ ಆಸ್ತಿ ಹಕ್ಕುಗಳ ಬಗ್ಗೆ ಜಾಗೃತವಾಗಿರಬೇಕು ಭೂ ಒತ್ತುವರಿಯನ್ನು ಹೇಗೆ ಎದುರಿಸಬೇಕು ಎಂದು ನೋಡೋಣ ಬನ್ನಿ. ಈ ಲೇಖನದಲ್ಲಿ ಭೂ ಅತಿಕ್ರಮಣ ಕಾಯ್ದೆ, ಕಾನೂನು, ಸಲಹೆಗಳನ್ನು ನೀಡಲಾಗಿದೆ.

ಭೂ ಮಾಲೀಕರ ಆಸ್ತಿಯನ್ನು ಬೇರೋಬ್ಬ ವ್ಯಕ್ತಿ ಬಂದು ಆಕ್ರಮಿಸಿಕೊಳ್ಳುವುದು ಅಥವಾ ತನ್ನ ಜಾಗವನ್ನು ಮೀರಿ ಇತರೆ ಮಾಲೀಕರ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ಭೂ ಅತಿಕ್ರಮಣ ಎಂದು ಕರೆಯಲಾಗುತ್ತದೆ. ಭೂಮಿ ಅತಿಕ್ರಮಣಕ್ಕೂ ಆಸ್ತಿ ಅತಿಕ್ರಮಣಕ್ಕೂ ಸಣ್ನ ವ್ಯತ್ಯಾಸವಷ್ಟೇ ಇದೆ. ಮನೆ ನಿರ್ಮಾಣದ ವೇಳೆ ಬೇರೆ ಮಾಲೀಕರ ಜಾಗದಲ್ಲಿ ಕಾಂಪೌಂಡ್‌ ಅನ್ನು ಹೆಚ್ಚುವರಿಯಾಗಿ ನಿರ್ಮಿಸಿಕೊಳ್ಳುವುದು ಭೂಮಿ ಅತಿಕ್ರಮಣವಾದರೆ, ಮನೆಯ ಸುತ್ತದ ಜಾಗವನ್ನು ಸ್ವಲ್ಪ ಹೆಚ್ಚಿಸಿಕೊಳ್ಳುವ ಸಲುವಾಗಿ ಇತರರ ಸ್ಥವನ್ನು ಆಕ್ರಮಿಸಿಕೊಳ್ಳುವುದಕ್ಕೆ ಆಸ್ತಿ ಅತಿಕ್ರಮಣ ಎಂದು ಹೇಳಲಾಗುತ್ತದೆ.

ಆದರೆ, ಇದು ಆಸ್ತಿ ಮಾರಾಟ ಮಾಡುವಾಗ ತೊಂದರೆಯನ್ನುಂಟು ಮಾಡುತ್ತದೆ. ಯಾಕೆಂದರೆ, ಅತಿಕ್ರಮಣ ಮಾಡಿಕೊಂಡ ಜಾಗವನ್ನು ಹಿಂಪಡೆಯುವುದು ಕಷ್ಟಕರವಾದ ಕೆಲಸ. ಕೆಲವರು ಈ ಸಮಸ್ಯೆಯನ್ನು ದೊಡ್ಡದಾಗಿ ಮಾಡುತ್ತಾರೆ. ಇನ್ನೊಬ್ಬರ ಭೂಮಿ ಅಥವಾ ಆಸ್ತಿಯನ್ನು ಅಕ್ರಮವಾಗಿ ಬಳಸುವ ವ್ಯಕ್ತಿಯೂ ಅದನ್ನೂ ತನಗೇ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಇದು ಮಾಲೀಕರಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ಜೊತೆಗೆ ಖರೀದಿದಾರರಿಗೆ ಸಮಸ್ಯೆಗಳಾಗುತ್ತದೆ. ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 441 ರ ಪ್ರಕಾರ, ಯಾರಾದರೂ ಅಕ್ರಮವಾಗಿ ಬೇರೊಬ್ಬರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಅತಿಕ್ರಮಣ ಸಂಭವಿಸುತ್ತದೆ.

ಭೂಮಿ ಅತಿಕ್ರಮಣದಲ್ಲಿ, ಐಪಿಸಿಯ ಸೆಕ್ಷನ್ 447 ರ ಅಡಿಯಲ್ಲಿ ದಂಡವನ್ನು ಒದಗಿಸಲಾಗಿದೆ. ವ್ಯಕ್ತಿ ತಪ್ಪಿತಸ್ಥ ಎಂಬುದು ಸಾಬೀತಾದರೆ, ಅವರು 550 ರೂ. ದಂಡವನ್ನು ಪಾವತಿಸುವುದರ ಜೊತೆಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಸೆಕ್ಷನ್ 441 ಖಾಸಗಿ ಭೂಮಿಯಲ್ಲಿ ಅತಿಕ್ರಮಣಕ್ಕೆ ಅನ್ವಯಿಸುತ್ತದೆ ಮತ್ತು ಇದು ಸೆಕ್ಷನ್ 442 ರ ಅಡಿಯಲ್ಲಿ ಅಪರಾಧವಾಗಿದೆ. ನ್ಯಾಯಾಂಗವು ಭೂ ಒತ್ತುವರಿ ಕಾಯಿದೆಯಡಿಯಲ್ಲಿ ಅತಿಕ್ರಮಣವನ್ನು ನಿಲ್ಲಿಸಬಹುದು ಅಥವಾ ನಿರ್ಬಂಧಿಸಬಹುದು. ಭೂ ಒತ್ತುವರಿ ಕಾಯಿದೆ ಪ್ರಕಾರ ಅತಿಕ್ರಮಣಕ್ಕೆ ಪರಿಹಾರ ನೀಡುವಂತೆ ನ್ಯಾಯಾಂಗದಲ್ಲಿ ಕೇಳಬಹುದು. ಪ್ರಸ್ತುತ ಭೂಮಿಯ ಮೌಲ್ಯ ಹಾಗೂ ಉಂಟಾದ ನಷ್ಟದ ಆಧಾರದ ಮೇಲೆ ಪರಿಹಾರವನ್ನು ಲೆಕ್ಕ ಹಾಕಲಾಗುತ್ತದೆ.

ಹಾನಿಯನ್ನು ಪಡೆಯಲು, ಆದೇಶ 39 (ನಿಯಮಗಳು 1, 2 ಮತ್ತು 3) ಪ್ರಕಾರ ನ್ಯಾಯಾಲಯಕ್ಕೆ ತೆರಳುವುದು ಸೂಕ್ತ. ನಿಮ್ಮ ಜಮೀನು ಅಥವಾ ಆಸ್ತಿಯನ್ನು ಒತ್ತುವರಿ ಮಾಡಿರುವುದು ಕಂಡುಬಂದರೆ, ಭೂ ಒತ್ತುವರಿ ಕಾಯ್ದೆಯಡಿ ಅಧಿಕಾರಿಗಳಿಗೆ ದೂರು ಪತ್ರವನ್ನು ಸಲ್ಲಿಸಿ. ಭೂ ಅತಿಕ್ರಮಣವಾಗದಂತೆ ತಡೆಯಲು, ಆಸ್ತಿಯ ಸುತ್ತಲೂ ಬೋರ್ಡ್ ಅಥವಾ ಬೇಲಿ ಹಾಕಿ. ಆಸ್ತಿಯನ್ನು ನೋಡಿಕೊಳ್ಳಲು ವ್ಯಕ್ತಿಯನ್ನು ನೇಮಿಸಿ. ಆಸ್ತಿಗೆ ನಿಯಮಿತವಾಗಿ ಭೇಟಿ ನೀಡುವುದು ಒಳ್ಳೆಯದು. ಸರಿಯಾದ ದಾಖಲೆಗಳನ್ನು ತಯಾರಿಸಿಕೊಳ್ಳಿ. ನೋಂದಣಿಯನ್ನು ಪಡೆಯುವುದನ್ನು ಮರೆಯದಿರಿ. ಕಾಲಕಾಲಕ್ಕೆ ಪ್ರಸ್ತುತ ನಿಯಮಗಳ ಮೇಲೆ ಗುತ್ತಿಗೆ ಒಪ್ಪಂದವನ್ನು ನವೀಕರಿಸಿ.

Related News

spot_img

Revenue Alerts

spot_img

News

spot_img