ಬೆಂಗಳೂರು;ಮುಂದಿನ ವರ್ಷ ಫೆಬ್ರವರಿ ಒಳಗಾಗಿ ಸಾರಿಗೆ ನಿಗಮಗಳಿಗೆ ಹೊಸದಾಗಿ 5,500 ಬಸ್ ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸದನದಲ್ಲಿ MLC ಶಶೀಲ್ ನಮೋಶಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕಿರುವ ಜನಸಂಖ್ಯೆಯ ಅನುಗುಣವಾಗಿ 35 ಸಾವಿರ ಬಸ್ ಗಳನ್ನು ಹೊಂದಿರಬೇಕಿತ್ತು. ಆದರೆ, 23 ಸಾವಿರ ಬಸ್ ಮಾತ್ರ ಇವೆ. ಹಾಗಾಗಿ ಹೊಸ ಬಸ್ ಖರೀದಿಯ ಜೊತೆಗೆ 9 ಸಾವಿರ ಕಂಡಕ್ಟರ್, ಮೆಕ್ಯಾನಿಕ್ ಸೇರಿ ಇತರೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದಿದ್ದಾರೆ.ಕಾಂಗ್ರೆಸ್ನ ಉಮಾಶ್ರೀ, ಕೆ.ಪಿ. ಅನಿಲ್ಕುಮಾರ್, ಬಿಜೆಪಿಯ ಶಶಿಲ್ ನಮೋಶಿ, ಜೆಡಿಎಸ್ ಕೆ.ಎ. ತಿಪ್ಪೇಸ್ವಾಮಿ ಪ್ರತ್ಯೇಕವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವಿಶೇಷ ಬಂಡವಾಳ ನೆರವಿನಡಿ 100 ಕೋಟಿ ರೂ.ಗಳನ್ನು ಕೆಎಸ್ಆರ್ಟಿಸಿಗೆ ಸರ್ಕಾರ ಒದಗಿಸಿದೆ. 250 ಕರ್ನಾಟಕ ಸಾರಿಗೆ, 40 ಪಲ್ಲಕ್ಕಿ ನಾನ್-ಎಸಿ, ಸ್ವೀಪರ್ ಜತೆಗೆ 350 ಸಾಮಾನ್ಯ ಸಾರಿಗೆ ಬಸ್ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಂಟಿಸಿಗೆ 150 ಕೋಟಿ ರೂ. ಅನುದಾನ ಲಭಿಸಿದ್ದು, 320 ಹವಾನಿಯಂತ್ರಿತ ಎಲೆಕ್ನಿಕ್ ಬಸ್ಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಲ್ಲದೆ ಜಿಸಿಸಿ ಆಧಾರದಲ್ಲಿ 840 ಡೀಸೆಲ್, 921 ಎಲೆಕ್ನಿಕ್, 100 ಫೀಡರ್, 10 ಡಬಲ್ ಡೆಕ್ಕರ್ ಹವಾನಿಯಂತ್ರಿತ ಬಸ್ಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವಿವರಿಸಿದರು.ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಜಿಸಿಸಿ ಆಧಾರದಲ್ಲಿ 285 ಗ್ರಾಮಾಂತರ ಸಾರಿಗೆ ಬಸ್ಗಳು ಹಾಗೂ ನಿಗಮಕ್ಕೆ ಹಂಚಿಕೆಯಾದ 150 ಕೋಟಿ ರೂ. ಅನುದಾನದಲ್ಲಿ 375 ಗ್ರಾಮಾಂತರ ಬಸ್ಗಳ ಖರೀದಿಗೆ ಅನುಮತಿ ನೀಡಲಾಗಿದೆ,