21.1 C
Bengaluru
Tuesday, July 9, 2024

ವ್ಯಾಜ್ಯಮುಕ್ತ ರಾಜ್ಯಕ್ಕಾಗಿ ಗ್ರಾಮ ನ್ಯಾಯಾಲಯಗಳು

ಬೆಂಗಳೂರು; ನ್ಯಾಯಾಲಯಗಳನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದು ಈ ಉಪಕ್ರಮದ ಉದ್ದೇಶವಾಗಿದೆ. ರಾಜ್ಯವನ್ನು ವ್ಯಾಜ್ಯಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ಇನ್ನೆರಡು ತಿಂಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸರ್ಕಾರ ಆರಂಭಿಸುತ್ತಿದೆ.ಜನರಿಗೆ ಮನೆ ಬಾಗಿಲಿನಲ್ಲಿಯೇ ನ್ಯಾಯ ಒದಗಿಸುವದು ಇದರ ಉದ್ದೇಶವಾಗಿದೆ,ನಾಗರಿಕರಿಗೆ ನ್ಯಾಯ ನಿರಾಕರಣೆಯಾಗದೇ ಕೆಳಹಂತದಲ್ಲಿಯೇ ನ್ಯಾಯಾಲಯಗಳು ಇರಬೇಕು ಎಂಬುದು ಹಳ್ಳಿ ಕೋರ್ಟ್‌ಗಳ ಸ್ಥಾಪನೆಯ ಉದ್ದೇಶವಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಇವುಗಳಿಂದ ಸಾಕಷ್ಟು ಅನುಕೂಲವಾಗಲಿದೆ ಎಂಬ ಆಶಯ ಹೊಂದಲಾಗಿದೆ.ರೈತರು, ಕೂಲಿ ಕಾರ್ಮಿಕರು ಹಣ ವೆಚ್ಚ ಮಾಡಿಕೊಂಡು ಗ್ರಾಮ ನ್ಯಾಯಲಯಗಳು ಜೆಎಂಎಫ್‌ಸಿ ನ್ಯಾಯಾಲಯಗಳಿಗೆ ಸಮಾನ ಅಧಿಕಾರ ಹೊಂದಿರುತ್ತವೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಇವು ಕಾರ್ಯ ನಿರ್ವಹಿಸಲಿವೆ.ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಇವು ಕಾರ್ಯ ನಿರ್ವಹಿಸಲಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಈ ನ್ಯಾಯಾಲಯಗಳು ಕರು, ಕಾರ್ಯ ನಿರ್ವಹಣೆ ಮಾಡಲಿವೆ. ದಶಕಗಳಿಂದ ದೇಶದಲ್ಲಿ ಬಾಕಿ ಉಳಿದ ಪ್ರಕರಣಗಳ ಇತ್ಯರ್ಥಕ್ಕೆ 2006 -08 ರಲ್ಲಿ ಗ್ರಾಮ ನ್ಯಾಯಾಲಯಗಳನ್ನು ಜಾರಿಗೆ ತರಲಾಗಿತ್ತು. ಹಿಮಾಚಲ ಪ್ರದೇಶ ಹೊರತುಪಡಿಸಿ ಉಳಿದದೆ ಸ್ಥಗಿತಗೊಂಡಿವೆ.ಗ್ರಾಮ ಪಂಚಾಯಿತಿಗಳೆಂದು ಕರೆಯಲ್ಪಡುವ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿದೆ.

Related News

spot_img

Revenue Alerts

spot_img

News

spot_img