ಬೆಂಗಳೂರು, ಏ. 28 : ಮನೆಯನ್ನು ನಿರ್ಮಾಣ ಮಾಡುವಾಗ ಆಕಸ್ಮಿಕವಾಗಿ ಕೆಲ ವಾಸ್ತು ದೋಷಗಳು ಎದುರಾಗುತ್ತವೆ. ವಾಸ್ತು ತಜ್ಞರನ್ನು ಸಂಪರ್ಕಸಿ ಮನೆಯ ವಾಸ್ತುವಿನಂತೆ ನಿರ್ಮಾಣ ಮಾಡುತ್ತಿದ್ದರೂ, ಕೆಲವೊಮ್ಮೆ ತಪ್ಪುಗಳು ಆಗುತ್ತವೆ. ಇದರಿಂದ ಉಂಟಾಗುವಂತಹ ದೋಷಗಳಿಗೆ ಕೆಲ ಟಿಪ್ಸ್ ಗಳನ್ನು ನೀಡಲಾಗಿದೆ. ವಾಸ್ತುವಿನಲ್ಲಿ ಕೇವಲ ಉಪಕರಣಗಳೀಂದಲೇ ಎಲ್ಲಾ ದೋಷಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಕೆಲವು ದೋಷಗಳಿಗೆ ಮಾತ್ರವೇ ಪರಿಹಾರವನ್ನು ಕಂಡುಕೊಳ್ಳಬಹುದು. ಈಗ ಟಾಯ್ಲೆಟ್ ಅನ್ನು ಬ್ರಹ್ಮಸ್ಥಾನದಲ್ಲೋ ಅಥವಾ ಉತ್ತರ ಈಶಾನ್ಯದಲ್ಲಿ ಅಂದರೆ ಯಾವ ದಿಕ್ಕಿನಲ್ಲಿ ನಿರ್ಮಿಸಬಾರದೋ ಅಲ್ಲಿ ನಿರ್ಮಾಣ ಮಾಡಿದ್ದರೆ ಪರಿಹಾರ ಮಾಡುವುದು ಕಷ್ಟವಾಗುತ್ತದೆ.
ಇನ್ನು ಅಡುಗೆ ಮನೆಯನ್ನು ಆಗ್ನೇಯದಲ್ಲೋ ವಾಯುವ್ಯದಲ್ಲೋ ಇದ್ದು, ಫೇಸಿಂಗ್ ಡೈರೆಕ್ಷನ್ ನಲ್ಲಿ ಮಾತ್ರವೇ ಸಮಸ್ಯೆ ಇದ್ದರೆ, ಆಗ ಉಪಕರಣಗಳನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದು. ಇನ್ನು ಬಾಗಿಲುಗಳ ದಿಕ್ಕುಗಳನ್ನು ಬದಲಾಯಿಸುವುದು, ಕಿಟಕಿಯನ್ನು ಚೇಂಜ್ ಮಾಡುವುದು. ಪೂಜಅ ರೂಮ್ ಎದುರಿಗೆ ಶೌಚಾಲಯಗಳು ಬರುತ್ತವೆ.
ಹೀಗಾಗಿ ಮನೆಯನ್ನು ನಿರ್ಮಾಣ ಮಾಡುವಾಗಲೇ ಈ ರೀತಿಯಲ್ಲಿ ಬದಲಾವಣೆಗಳನ್ನು ಮಾಡುವುದಾದರೆ, ವಾಸ್ತು ತಜ್ಞರನ್ನು ಸಂಪರ್ಕಿಸಿ ಮಾಡುವುದು ಸೂಕ್ತವಾಗಿರುತ್ತದೆ. ಎರಡನೇಯದಾಗಿ ಮನೆಯನ್ನು ನಿರ್ಮಾಣ ಮಾಡುವಾಗ ಮೂರನೇ ಫ್ಲೋರ್ ನಲ್ಲಿ ಯಾರಾದರೂ ಎಡವಿ ಬೀಳುತ್ತಾರೆ. ಆಗ ಅವರು ಸಾವನ್ನಪ್ಪಿದರೆ ಕೂಡ ಇದೆಲ್ಲವೂ ಮನೆಯ ಯಜಮಾನನಿಗೆ ಲೋಪ ದೋಷಗಳು ಬರುತ್ತವೆ. ಹೀಗಾದಾಗ ಸರಿಯಾದ ಸಂಸ್ಕಾರಗಳು ಮಾಡಬೇಕಾಗುತ್ತದೆ. ಮೂಹೂರ್ತಗಳನ್ನು ಬದಲಾಯಿಸಿ ಗುದ್ಲಿ ಪೂಜೆ ಮಾಡುವುದು, ರೂಫ್ ಹಾಕುವುದನ್ನು ಮಾಡಿರುತ್ತಾರೆ.
ಹೀಗೆ ಮನೆಯನ್ನು ನಿರ್ಮಾಣ ಮಾಡುವಾಗ ಕೆಲ ದೋಷಗಳು ಉಂಟಾಗಿರುತ್ತವೆ. ಇವೆಲ್ಲವೂ ಕೂಡ ಕೆಲವೊಮ್ಮೆ ಗೃಹಪ್ರವೇಶ ಮಾಡಿ ಎರಡು ಮೂರು ವರ್ಷಗಳ ಬಳಿಕ ತಿಳಿಯುತ್ತದೆ. ಕೆಲ ಲೋಪದೋಷಗಳು ನಡೆದಿವೆ ಎಂಬುದು ತಿಳಿದಾಗ ಏನೆಲ್ಲಾ ಅಶುಭಗಳು ಮನೆಯಲ್ಲಿ ನಡೆಯುತ್ತಿವೆ ಎಂಬುದನ್ನು ಅರ್ಥ ಮಾಡಿಕೊಂಡು ಈ ಬಗ್ಗೆ ತಿಳಿಸಿ ಹೇಳಿ ಪುನಃ ಗೃಹಪ್ರವೇಶೌನ್ನು ಮಾಡಸುವುದು, ಪೂಜೆಗಳನ್ನು ಮಾಡಿಸುವುದು, ಮನೆಗೆ ದಿಗ್ಭಂಧನವನ್ನು ಹಾಕಿಸುವುದು ಹಾಗೆ ಹೋಮ ಹವನಗಳನ್ನು ಮಾಡಿಸಬೇಕಾಗುತ್ತದೆ.