26.7 C
Bengaluru
Saturday, May 24, 2025

ಮನೆಯಲ್ಲಿ ನಲ್ಲಿ ಸೋರುವುದು, ಗೋಡೆಗಳಲ್ಲಿ ನೀರು ಇಳಿಯುವುದು ಅಶುಭದ ಸಂಕೇತವೇ..?

ಬೆಂಗಳೂರು, ಜ. 16 : ಮನೆಯಲ್ಲಿ ನಡೆಯುವ ಕೆಲ ಘಟನೆಗಳು ಅಶುಭದ ಸಂಕೇತ ಎಂಬುದು ಹಲವು ಭಾರತೀಯರ ನಂಬಿಕೆಯಾಗಿದೆ. ದೇವರ ಪೂಜೆ ಮಾಡುವಾಗ ದೀಪ ಆರುವುದು, ಆಹಾರ ಚೆಲ್ಲುವುದು, ಅರಿಶಿಣ-ಕುಂಕುಮ ಕೈ ಜಾರಿ ನೆಲಕ್ಕೆ ಬೀಳುವುದು, ಹೊರಗಡೆ ಹೊರಟಾಗ ಎಡವಿದರೆ ಹೀಗೆ ಸಾಕಷ್ಟು ಘಟನೆಗಳು ಅಶುಭದ ಸಂಕೇತವಾಗಿದೆ. ಇದೇ ರೀತಿಯಲ್ಲಿ ಮನೆಯಲ್ಲಿ ನಲ್ಲಿ ಲೀಕ್ ಆಗುವುದು, ಗೋಡೆಗಳಲ್ಲಿ ನೀರು ಇಳಿಯುವುದು ಕೂಡ ಅಶುಭದ ಸಂಕೇತ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರಗಳು ಕೂಡ ಇವೆ. ಮನೆಯಲ್ಲಿ ನೀರು ಸೋರುತ್ತಿದ್ದರೆ ಅದಕ್ಕೆ ಕಾರಣವೇಣು ಎಂಬುದನ್ನು ಮೊದಲು ನೋಡೋಣ ಬನ್ನಿ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಣ್ಣ ಪುಟ್ಟ ಪ್ಲಂಬರ್ ಕೆಲಸಗಳು ಇದ್ದೇ ಇರುತ್ತವೆ. ಆಗಾಗ ಮನೆಯಲ್ಲಿ ನಲ್ಲಿಗಳು ತೊಟ್ಟಿಕ್ಕುತ್ತವೆ. ಇನ್ನು ಗೋಡೆಗಳಲ್ಲಿ ನೀರು ಸೋರಿಕೆಯಾಗುತ್ತವೆ. ಇದೆಲ್ಲವನ್ನು ಸಾಮಾನ್ಯ ಸಮಸ್ಯೆ ಎಂದು ಸುಮ್ಮನಾಗುವವರೇ ಹೆಚ್ಚು. ಆದರೆ, ಪ್ಲಂಬರ್ ಅನ್ನು ಕರೆಸಿ, ಈ ಸಮಸ್ಯೆಗೆ ಬಗೆ ಹರಿಸಿದರೂ ಪದೇ ಪದೇ ನಲ್ಲಿ ಲೀಕ್ ಆಗುತ್ತಲೇ ಇರುತ್ತದೆ. ಎಷ್ಟು ಅಂತ ಸರಿ ಮಾಡಿಸುವುದು ಎಂದು ಹಾಗೆ ಬಿಟ್ಟರೂ ಸಮಸ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಅಂತೂ ಆಗುವುದಿಲ್ಲ. ಅಷ್ಟಕ್ಕೂ ಹೀಗೆ ನಲ್ಲಿ ಲೀಕ್ ಆಗುವುದು ವಾಸ್ತು ದೋಷವೇ.? ಹಾಗಿದ್ದರೆ ಇದಕ್ಕೆ ಪರಿಹಾರವೇನು ಎಂಬ ನಿಮ್ಮ ಪ್ರಶ್ನೆಗಳಿಗೆ ಕೆಳಗೆ ಉತ್ತರ ನೀಡಲಾಗಿದೆ.

ನಲ್ಲಿಯಲ್ಲಿ ನೀರು ಲೀಕ್ ಆಗುವುದು ವಾಸ್ತುವಿನಲ್ಲಿ ಇದೊಂದು ಲೋಪ ದೋಷ. ಇದು ಅಶುಭದ ಸಂಕೇತವಾಗಿದ್ದು, ಕರ್ಮಫಲ ಎಂದು ಹೇಳಲಾಗುತ್ತೆ. ವ್ಯಕ್ತಿ ಯಾವ ಮನೆಗೆ ಹೋಗಬೇಖು ಅಲ್ಲಿ ಶುಭವಾಗುತ್ತಾ ಅಶುಭವಾಗುತ್ತಾ ಎಂಬುದನ್ನು ಕರ್ಮಫಲಗಳನ್ನು ನೋಡಿ ನಿರ್ಧರಿಸಲಾಗುತ್ತೆ. ವ್ಯಕ್ತಿ ಹುಟ್ಟಿದಾಗ ಆತನ ಜಾತಕವನ್ನು ನೋಡಿ ಇದನ್ನೆಲ್ಲಾ ತಿಳಿಯಬೇಕು. ಒಬ್ಬ ವ್ಯಕ್ತಿ ವಾಸಿಸುವ ಮನೆಯೂ ಕೂಡ ಪೂರ್ವ ಕಾಲದ ಕಾರಣಗಳಿಂದಲೇ ನಿರ್ಧರಿತವಾಗಿರುತ್ತದೆ. ಈ ಬಗ್ಗೆ ಈ ಹಿಂದೆಯೇ ನೀಡಿದ ಲೇಖನದಲ್ಲಿ ತಿಳಿಸಲಾಗಿದೆ. ಇನ್ನು ಈ ರೀತಿ ನೀರು ಸೋರುತ್ತಿದೆ ಎಂದರೆ, ಅಥವಾ ಗೋಡೆಯಲ್ಲಿ ನೀರು ಇಳಿಯುತ್ತಿದೆ ಎಂದರೆ ಅದು ಒಳ್ಳೆಯದ್ದೇನೋ ಆಗಬೇಕಿರುವುದು ಕೆಡುತ್ತದೆ ಎಂದರ್ಥ.

ಒಳ್ಳೆಯ ನೀರು ಸೋರುತ್ತಿದ್ದರೂ, ಆ ನೀರು ಹೇಗೆ ಕೊಳೆತ ವಾಸನೆ ತರುತ್ತದೋ ಹಾಗೆಯೇ, ಆ ಮನೆಯಲ್ಲಿ ನಡೆಯಬೇಕಿರುವ ಒಳ್ಳೆಯ ಕಾರ್ಯಕ್ಕೆ ಕೆಡುಕ್ಕಾಗುತ್ತದೆ ಎಂದರ್ಥ. ಈಗ ಮಣ್ಣಿ ಮೇಲೆ ನೀರು ಬಿದ್ದರೆ, ಅದು ಕೆಸರಾಗುತ್ತದೆ. ಆಗ ನೀರು ತನ್ನ ಸ್ವಾಭಾವವನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಮಣ್ಣು ಕೂಡ ಅದರ ಸ್ವಾಭಾವವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಅಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ನೆಗಲೆಕ್ಟ್ ಮಾಡುವುದು ಒಳ್ಳೆಯದಲ್ಲವೇ ಅಲ್ಲ.

ಇನ್ನು ಯಾವ ದಿಕ್ಕಿನಲ್ಲಿ ನೀರು ಲೀಕ್ ಆಗುತ್ತದ್ದರೆ ಕುಟುಂಬದ ಯಾವ ಸದಸ್ಯರಿಗೆ ತೊಂದರೆ ಉಂಟಾಗುತ್ತದೆ ಎಂದು ತಿಳೀಯೋಣ ಬನ್ನಿ. ನೈರುತ್ಯದಲ್ಲಿ ನೀರು ಸೋರಿಕೆಯಾದರೆ, ಯಜಮಾನನಿಗೆ ತೊಂದರೆಯಾಗುತ್ತದೆ. ವಾಯುವ್ಯದಲ್ಲಿ ನೀರು ಸೋರಿದರೆ, ಹಣಕಾಸಿನ ಸಮಸ್ಯೆ ಯಾಗುತ್ತದೆ. ಕೆಲಸದಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಈಶಾನ್ಯ ಮತ್ತು ಪೂರ್ವದಲ್ಲಿ ನೀರು ಹರಿದರೆ, ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗಬಹುದು. ಅಡುಗೆ ಮನೆಯಲ್ಲಿ ಸೋರಿಕೆಯಾದರೆ, ಅಲ್ಲಿ ಗಂಡ ಮತ್ತು ಹೆಂಡತಿ ನಡುವಿನ ಸಂಬಂಧಗಳಿಗೆ ತೊಂದರೆಯಾಗುತ್ತದೆ. ಕುಟುಂಬದಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತೆ. ಇನ್ನು ದಕ್ಷಿಣದಲ್ಲಿ ಸಮಸ್ಯೆ ಎದುರಾದರೆ, ಮನೆಯ ಮಗನಲ್ಲಿ ಸಮಸ್ಯೆ ಕಾಣುತ್ತದೆ.

Related News

spot_img

Revenue Alerts

spot_img

News

spot_img