22.6 C
Bengaluru
Saturday, July 27, 2024

IAS Officer Transfer: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 7 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್​ ಸರ್ಜರಿ ಮಾಡಿದ್ದು, 7 ಜನ ಐಎಎಸ್​ ಅಧಿಕಾರಿಗಳನ್ನು ವರ್ಗಾಯಿಸಿ ಬುಧವಾರ ಆದೇಶ ನೀಡಿದೆ.ಚುನಾವಣೆ ಘೋಷಣೆಯಾದ ಬೆನ್ನಲ್ಲೇ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

*ಕೆಪಿಸಿಎಲ್ ಎಂ.ಡಿಯಾಗಿದ್ದಂತ ಎಂ ಎಸ್ ಶ್ರೀಖರ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೆಕ್ರೇಟರಿಯಾಗಿ ನೇಮಕ ಮಾಡಲಾಗಿದೆ

*ಶೇಕ್ ತನ್ವೀರ್ ಆಸೀಫ್ (ಮಂಡ್ಯ ಜಿ.ಪಂ ಸಿಇಒ)ಅವರನ್ನು ಅಬಕಾರಿ ಇಲಾಖೆಯ ಹೆಚ್ಚುವರಿ ಕಮೀಷನರ್ ಹುದ್ದೆಯಿಂದ ವರ್ಗಾವಣೆ ಮಾಡಿ, ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ನೇಮಿಸಿದೆ.

* ಉನ್ನತ ಶಿಕ್ಷಣ ಇಲಾಖೆಯ ಡೆಪ್ಯೂಟಿ ಸೆಕ್ರೇಟರಿ ಲೋಖಂದೆ ಸಹೇಲ್ ಸುಧಾಕರ್ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ನೇಮಿಸಲಾಗಿದೆ

*ಹುದ್ದೆಯ ನಿರೀಕ್ಷೆಯಲ್ಲಿದ್ದಂತ ರಂಗಪ್ಪ ಎಸ್ ಅವರನ್ನು ಕೆ ಎಸ್ ಎಂ ಎಸ್ ಸಿ ಎಲ್ ಎಂ.ಡಿಯಾಗಿ ನೇಮಿಸಿದೆ.

*ಕಲಬುರ್ಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದಂತ ಗರಿಮಾ ಪನ್ವರ್ ಅವರನ್ನು ಯಾದಗಿರಿ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ನೇಮಕ ಮಾಡಲಾಗಿದೆ

*ಆಕೃತಿ ಬನ್ಸಾಲ್ ಅವರನ್ನು ದೆಹಲಿಯ ಕರ್ನಾಟಕ ಭವನದ ಹೆಚ್ಚುವರಿ ಪ್ರಾದೇಶಿಕ ಕಮೀಷನರ್ ಆಗಿ ನಿಯೋಜಿಸಿದೆ.

*ಆಯುಷ್ ಇಲಾಖೆಯ ಕಮೀಷನರ್‌ ಆಗಿದ್ದಂತ ಮಂಜುನಾಥ್ ಜೆ ಅವರನ್ನು ಎಡ್ಸ್ ನಿಯಂತ್ರಣ ಸೊಸೈಟಿಯ ಪ್ರೊಜೆಕ್ಟ್ ಡೈರೆಕ್ಟರ್ ಆಗಿ ನೇಮಿಸಿದೆ

Related News

spot_img

Revenue Alerts

spot_img

News

spot_img