22.9 C
Bengaluru
Friday, July 5, 2024

ಚಾಂದ್ರಮಾನ ಹಾಗೂ ಸೌರಮಾನ ಇದೆರಡರ ಅರ್ಥವೇನು..?

ಬೆಂಗಳೂರು, ಮಾ. 21 : ಯುಗಾದಿ ಹಬ್ಬವನ್ನು ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಆಚರಿಸುವ ಪದ್ಧತಿಯಿದೆ. ಈ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಎಂದರೇನು..? ಚಾಂದ್ರಮಾನ ಯುಗಾದಿಗೂ, ಸೌರಮಾನ ಯುಗಾದಿಗೂ ಇರುವ ವ್ಯತ್ಯಾಸವೇನು..? ಈ ಯುಗಾದಿಗಳು ಭಿನ್ನ ಭಿನ್ನವೇ.? ಈ ಯುಗಾದಿಯ ಮಹತ್ವವೇನು..?

ಯುಗಾದಿ ಹಬ್ಬವನ್ನು ಸಾಮಾನ್ಯವಾಗಿ ದೇಶದ ಮೂಲೆ ಮೂಲೆಯಲ್ಲೂ ಆಚರಿಸುತ್ತಾರೆ. ಕರ್ನಾಟಕದ ಹಲವಾರು ಕಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಹಾಗಾದರೆ, ಸೌರಮಾನ ಯುಗಾದಿ ಮತ್ತು ಚಾಂದ್ರಮಾನ ಯುಗಾದಿ ಅನ್ನು ಅಚರಿಸಲಾಗುತ್ತದೆ.

ಸೌರಮಾನ ಯುಗಾದಿ:
ಸೌರಮಾನ ಯುಗಾದಿಯನ್ನು ತಮಿಳುನಾಡು, ಕೇರಳ, ಬಂಗಾಳಿ, ಒರಿಸ್ಸಾ, ಅಸ್ಸಾಮ್, ಪಂಜಾಬ್‌ ಹಾಗೂ ಮಂಗಳುರಿನಲ್ಲಿ ಸೌರಮಾನ ಯುಗಾದಿ ಅನ್ನು ಆಚರಣೆ ಮಾಡಲಾಗುತ್ತದೆ. ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ, ಸುಮಾರು 13 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನನ್ನು ಕಾಣುವ ನಕ್ಷತ್ರವನ್ನು ‘ಮಹಾನಕ್ಷತ್ರ’ ಎಂದು ಕರೆಯಲಾಗುತ್ತದೆ. ಒಂದು ರಾಶಿಯನ್ನು ಆವರಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ.

ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ. ಆ ದಾಟುವ ಸಮಯವನ್ನು ‘ಸಂಕ್ರಮಣ’ ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಈ ಹನ್ನೆರಡು ರಾಶಿಗಳನ್ನು ಆವರಿಸಲು 365.25 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೌರ ಮಾರ್ಗದ ಪ್ರಕಾರ (ಭೂಮಿಗೆ ಸಂಬಂಧಿಸಿದಂತೆ), ವರ್ಷದಲ್ಲಿ 365.25 ದಿನಗಳಿವೆ. ಸೂರ್ಯ,ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ದಾಟಿದ ಮರುದಿನವನ್ನು ಹೊಸ ವರ್ಷದ ದಿನವೆಂದು ಪರಿಗಣಿಸಲಾಗುತ್ತದೆ.

ಚಾಂದ್ರಮಾನ ಯುಗಾದಿ
ಚಂದ್ರನ ಸ್ಥಾನ ಬದಲಾವಣೆಯನ್ನು ಅನುಸರಿಸುವ ಮೂಲಕ ವರ್ಷದಲ್ಲಿನ ದಿನಗಳನ್ನು ಲೆಕ್ಕಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಕಾರ, ಹನ್ನೆರಡು ತಿಂಗಳು ಸೇರಿ ಒಂದು ವರ್ಷ. ಈ ವ್ಯವಸ್ಥೆಯ ಪ್ರಕಾರ ವರ್ಷದಲ್ಲಿ 354 ದಿನಗಳಿವೆ. ಇದು ಸೌರಮಾನ ಮತ್ತು ಚಾಂದ್ರಮಾನ ವರ್ಷಗಳ ನಡುವೆ ಹನ್ನೊಂದು ದಿನಗಳ ಕೊರತೆಗೆ ಕಾರಣವಾಗುತ್ತದೆ. ಆದ್ದರಿಂದ ಮೂರು ವರ್ಷಗಳಿಗೊಮ್ಮೆ, ವ್ಯತ್ಯಾಸವು ಒಂದು ತಿಂಗಳಿಗೆ ಸಮನಾಗಿರುವಾಗ ನಾವು ಒಂದು ತಿಂಗಳನ್ನು ಹೆಚ್ಚಾಗಿ ಸೇರಿಸಿ, ಆ ತಿಂಗಳನ್ನು ‘ಚಂದ್ರ ಅಧಿಕ ಮಾಸ’ ಎಂದು ಕರೆಯುತ್ತೇವೆ.

ಈ ಮೂಲಕ ಸೌರಮಾನ ವರ್ಷಕ್ಕೆ ಸೇರಿಸುತ್ತೇವೆ. ಈ ಕಾರಣಕ್ಕಾಗಿಯೇ ‘ಸೌರ ಸಂವತ್ಸರ’ ವನ್ನು ಸ್ಥಿರ ಸಂವತ್ಸರ ಎಂದೂ ‘ಚಂದ್ರ ಸಂವತ್ಸರ’ ವನ್ನು ಅಸ್ಥಿರ ಸಂವತ್ಸರವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕದ ಕರಾವಳಿಯ ಭಾಗದಲ್ಲಿ ಸೂರ್ಯಮಾನ ಯುಗಾದಿ ಅಂದರೆ ‘ವಿಷು’ ಹಬ್ಬವನ್ನು ಆಚರಿಸುತ್ತಾರೆ. ಕರ್ನಾಟದ ಇತರ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ.

ಈ ದಿನ ಕುಟುಂಬದ ಸದಸ್ಯರೆಲ್ಲರೂ ಬೇವು – ಬೆಲ್ಲ ಸವಿದು ಹಿರಿಯರ ಆಶೀರ್ವಾದವನ್ನು ಪಡೆದು ನಂತರ ತಮ್ಮ ದಿನವನ್ನು ನಡೆಸುತ್ತಾರೆ. ಕೇರಳದಲ್ಲಿ ವಿಷು ಕಣಿ ಇಡುವ ಸಂಪ್ರದಾಯವಿದೆ. ಈ ದಿನ ವಿಷು ಕಣಿಗೆ ಇಟ್ಟ ವಸ್ತುಗಳನ್ನು ಮೊದಲು ನೋಡುವುದರಿಂದ ಜೀವನದುದ್ದಕ್ಕೂ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.

Related News

spot_img

Revenue Alerts

spot_img

News

spot_img