22.6 C
Bengaluru
Saturday, July 27, 2024

ಬಡಾವಣೆಗಳಿಗೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥಕ್ಕೆ ಲೋಕ ಅದಾಲತ್

ಬೆಂಗಳೂರು, ಮಾ. 30 : ಬೆಂಗಳೂರಿನಲ್ಲಿ ವಿವಿಧ ಬಡಾವಣೆಗಳ ರಚನೆಗಾಗಿ ಬಿಡಿಎ 11,000 ಎಕರೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಲೋಕ ಅದಾಲತ್ ನಡೆಸುವಂತೆ ಬಿಡಿಎ ರಾಜ್ಯ ಸರ್ಕಾರವನ್ನು ಸಂಪರ್ಕ ಮಾಡಿದೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಬಿಡಿಎಗೆ ಬೂಮಿ ನೀಡಿದ ಮಾಲೀಕರದ್ದಾಗಿದೆ. ಹಂಚಿಕೆಯಾದ ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

30 ರಿಂದ 40 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳಿವೆ. ಬಿಡಿಎ ಶಿವರಾಮ ಕಾರಂತ್ ಲೇಔಟ್ ರಚನೆಗಾಗಿ ತಮ್ಮ ಆಸ್ತಿಯನ್ನು ಕಳೆದುಕೊಳ್ಳುತ್ತಿರುವ ರೈತರು ಮತ್ತು ಭೂಮಾಲೀಕರು ಯೋಜನೆಗೆ ಅಧಿಸೂಚಿಸಲಾದ ತಮ್ಮ ಆಸ್ತಿಯಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರವಾಗಿ ಪಡೆಯುತ್ತಾರೆ. ಬಿಡಿಎ ಅಧ್ಯಕ್ಷ ಎಸ್.ಆರ್. ಬಡಾವಣೆ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವವರಿಗೆ ಅವರ ಆಸ್ತಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ರೈತರು ಅಗಲಿದ ಆಸ್ತಿಯಲ್ಲಿಯೇ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಪರಿಹಾರವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

 

ಬಡಾವಣೆ ನಿರ್ಮಾಣವಾಗುವ ರೈತರಿಗೆ ಶೇ.40 ರಷ್ಟು ಭೂಮಿಯನ್ನು ಪರಿಹಾರವಾಗಿ ನೀಡಲು ಯೋಚಿಸಿದೆ. ಇದರ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರವನ್ನು ಸಂಪರ್ಕ ಮಾಡಿದೆ. ಶಿವರಾಮ ಕಾರಂತ ಬಡಾವಣೆ ಸೇರಿದಮತೆ ಹಲವು ಬಡಾವಣೆಗಳ ನಿರ್ಮಾಣಕ್ಕಾಗಿ ಬಿಡಿಎ ರೈತರ ಭೂಮಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ಜಮೀನಿನ ಮೇಲೆ ಹೆಚ್ಚಿನ ಪರಿಹಾರ ಬೇಖು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಕೆಲ ಪ್ರಕರಣಗಳು ಹಲವು ದಶಕಗಳಿಂದ ಇತ್ಯರ್ಥವಾಗದೇ ಹಾಗೆ ಉಳಿದಿವೆ.

 

ಈ ಪ್ರಕರಣಗಳು ಇತ್ಯರ್ಥಗೊಂಡರೆ, ಬಡಾವಣೆ ನಿರ್ಮಾಣ ಕಾರ್ಯದಿಂದ ಬಿಡಿಎ ಅಭಿವೃದ್ಧಿ ಕಾರ್ಯಗಳು ಮುನ್ನಡೆಸಲು ಸಾಧ್ಯವಾಗುತ್ತದೆ ಎಂಬುದು ಬಿಡಿಎ ಆಲೋಚನೆ. ಇನ್ನು 2020ರಲ್ಲಿ ಬಿಡಿಎ ಖಾತೆಯಲ್ಲಿ ₹260 ಕೋಟಿ ಇತ್ತು. ಈಗ ಪ್ರಾಧಿಕಾರದ ಬಳಿ ₹1,012 ಕೋಟಿ ಇದೆ ಎಂದು ವಿಶ್ವನಾಥ್ ಹೇಳಿದರು. ನಿವೇಶನಗಳ ಮಾರಾಟ, ಅತಿಕ್ರಮಿತ ಆಸ್ತಿಗಳ ವಸೂಲಿ ಮತ್ತಿತರ ಉಪಕ್ರಮಗಳಿಂದ ಆದಾಯ ಹೆಚ್ಚಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಬಿಡಿಎ 3,735 ನಿವೇಶನಗಳನ್ನು ಹರಾಜು ಮಾಡಿ ₹3,553 ಕೋಟಿ ಆದಾಯ ಗಳಿಸಿದೆ. ಅತಿಕ್ರಮಣ ತೆರವುಗೊಳಿಸುವ ಮೂಲಕ ಪ್ರಾಧಿಕಾರದ ₹2,000 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Related News

spot_img

Revenue Alerts

spot_img

News

spot_img