ನವದೆಹಲಿ: ಸುಪ್ರೀಂಕೋರ್ಟ್ನ ಶಿಫಾರಸ್ಸಿನ ಅನುಸಾರ ಹೈಕೋರ್ಟ್ಗಳ 13 ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿ ಕೇಂದ್ರಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಅವರೂ ಸದಸ್ಯರಾಗಿರುವ ಕೊಲಿಜಿಯಂ ಸಮಿತಿಯು, ವಕೀಲರಾದ ಎನ್. ಉನ್ನೀಕೃಷ್ಣನ್ ಹಾಗೂ ಕೌಶಿಕ್ ಗೋಸ್ವಾಮಿ ಅವರನ್ನು ಗುವಾಹಟಿ ಹೈಕೋರ್ಟ್ ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಎಂದು ಶಿಫಾರಸು ಮಾಡಿದೆ.ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಅವರೂ ಸದಸ್ಯರಾಗಿರುವ ಕೊಲಿಜಿಯಂ ಸಮಿತಿಯು, ವಕೀಲರಾದ ಎನ್. ಉನ್ನೀಕೃಷ್ಣನ್ ಹಾಗೂ ಕೌಶಿಕ್ ಗೋಸ್ವಾಮಿ ಅವರನ್ನು ಗುವಾಹಟಿ ಹೈಕೋರ್ಟ್ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಎಂದು ಶಿಫಾರಸು ಮಾಡಿದೆ.ವಕೀಲರಾದ ಸಿದ್ದಾರ್ಥ್ ಶಾ ಹಾಗೂ ಅಲೋಕ್ ಮಹ್ರಾ ಅವರನ್ನು ಉತ್ತರಾಖಂಡ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿಯೂ, ವಕೀಲರಾದ ಹಮ್ರಿತ್ ಸಿಂಗ್ ಗ್ರೆವಾಲ್, ದೀಪಿಂದರ್ ಸಿಂಗ್ ನಲ್ವ, ಸುಮಿತ್ ಗೋಯಲ್, ಸುದೀಪ್ತಿ ಶರ್ಮಾ ಹಾಗೂ ಕೀರ್ತಿ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಬೇಕು ಎಂದು ಕೊಲಿಜಿಯಂ ಶಿಫಾರಸಿನಲ್ಲಿ ಹೇಳಿದೆ.ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ವಿನಯ್ ಸರಫ್, ವಿವೇಕ್ ಜೈನ್, ಆಶಿಶ್ ಶ್ರೋಟಿ ಹಾಗೂ ಅಮಿತ್ ಸೇಠ್ ಅವರನ್ನು ನೇಮಕ ಮಾಡಬೇಕು ಎಂದೂ ಕೊಲಿಜಿಯಂ ಶಿಫಾರಸು ಮಾಡಿದೆ.