ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟಲು ಬಾಕಿ ಇರುವವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.ಟ್ರಾಫಿಕ್ ರೂಲ್ಸ್ ಬ್ರೇಕ್ ದಂಡದ ಪ್ಲಾನ್ ವಿಸ್ತರಣೆಆಗುವ ಸಾಧ್ಯತೆಇದೆ. . ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.ಸಾರಿಗೆ ಇಲಾಖೆಯಿಂದಲೂ ಈ ಬಗ್ಗೆ ನಮಗೆ ಪತ್ರ ಬಂದಿದೆ. ಮುಖ್ಯ ನ್ಯಾಯಮೂರ್ತಿಗಳೂ ಈ ಪ್ರಸ್ತಾವನೆಗೆ ಒಪ್ಪಿದ್ದಾರೆ, ಈ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ದರು. ಇನ್ನು ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ 50% ರಿಯಾಯಿತಿ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ದಂಡ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ದರು. ಬಹಳ ದಿನಗಳಿಂದ ಹಲವು ಕೇಸ್ನೊಂದಿಗೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದವರು ಶೇ.50 ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.ಇನ್ನು ಪೊಲೀಸ್ ಇಲಾಖೆ ಸಹ ರಿಯಾಯಿತಿ ನೀಡಿ ಸರ್ಕಾರದ ಬೊಕ್ಕಸ ತುಂಬಿಸಿದೆ. ನಮಗೆ ಶೇ. 50 ರ ರಿಯಾಯಿತಿ ವಿಸ್ತರಣೆ ಮಾಡುವಂತೆ ಮನವಿ ಬಂದಿತ್ತು,ಇದೀಗ ಮತ್ತೆ 14 ದಿನ ಟೈಂ ಕೊಡಲಾಗಿದೆ. ಈ ಬಗ್ಗೆ ಇಂದು ಅಧಿಕೃತ ಆದೇಶ ಹೊರಬೀಳಲಿದೆ. ಫೆಬ್ರವರಿ 11ಕ್ಕೆ ಡಿಸ್ಕೌಂಟ್ ಫೈನ್ ಕಟ್ಟಲು ಕೊನೆಯ ದಿನ ಆಗಿತ್ತು. ಇದೀಗ ಮತ್ತೆ ಸ್ವಲ್ಪ ದಿನಗಳ ಕಾಲ ಅವಕಾಶ ಕೊಡುವ ಬಗ್ಗೆ ಇಂದು ಕಾನೂನು ಸೇವಾ ಪ್ರಾಧಿಕಾರದ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಹೊಸ ರೆಸಲ್ಯೂಷನ್ ಪಾಸ್ ಮಾಡಲು ಮಾನ್ಯ ನ್ಯಾಯಮೂರ್ತಿ ಬಿ.ವೀರಪ್ಪ ನಿರ್ಧರಿಸಿದ್ದಾರೆ. ಫೆಬ್ರವರಿ 14 ರಿಂದ 28ರ ವರೆಗೂ ಮತ್ತೆ ಡಿಸ್ಕೌಂಟ್ ನೀಡಲು ತೀರ್ಮಾನ ಮಾಡಿ, ಹೊಸ ಆದೇಶ ಹೊರಬೀಳಲಿದೆ.
ಶೇ. 50 ರ ರಿಯಾಯಿತಿ ಸೌಲಭ್ಯದ ಮೂಲಕ ರಾಜ್ಯಾದ್ಯಂತ 9 ದಿನದಲ್ಲಿ 52.49 ಲಕ್ಷ ಕ್ಕೂ ಹೆಚ್ಚು ಕೇಸ್ ಗಳಿಂದ ಒಟ್ಟು 122.07 ಕೋಟಿ ರೂ. ದಂಡ ಸಂಗ್ರವಾಗಿದೆ.ಈ ಬಗ್ಗೆ ಸಂಚಾರ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಸಂಚಾರಿ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆಯಾದ ದಿನದಿಂದ ನಿನ್ನೆಯವರೆಗೆ 52.49 ಲಕ್ಷ ಪ್ರಕರಣಗಳಲ್ಲಿ 122.07 ಕೋಟಿ ರೂಪಾಯಿ ದಂಡ ಕಲೆಕ್ಷನ್ ಆಗಿದೆ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಶನಿವಾರ ಕೊನೆ ದಿನವಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರು. ದಂಡ ಸಂಗ್ರಹವಾಗಿದೆ