27.7 C
Bengaluru
Friday, May 23, 2025

ಸವಣೂರು ಎಸಿ ಕಚೇರಿ ಸಿಬ್ಬಂದಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ

ಸವಣೂರು: ಎ.ಸಿ. ಕೋರ್ಟಿನಲ್ಲಿರುವ ಜಮೀನು ವ್ಯಾಜ್ಯದ ಆದೇಶ ಪ್ರತಿಯನ್ನು ನೀಡಲು 10 ಸಾವಿರ ಲಂಚ ಪಡೆಯುವಾಗ ಸವಣೂರು ಉಪವಿಭಾಗಾಧಿಕಾರಿ ಕಚೇರಿಯ ಕೇಸ್‌ ವರ್ಕರ್‌ ಕುಮಾರ ನೆಗಳೂರು ಎಂಬಾತ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ರೈತ ಗುಡ್ಡಪ್ಪ ನಿಂಗಪ್ಪ ದೊಡ್ಡಮನಿ ಅವರು ತಮ್ಮ ತಂದೆಯ ಹೆಸರಿನಲ್ಲಿರುವ 16 ಗುಂಟೆ ಜಮೀನಿನ ಮೇಲಿರುವ ದಾವೆಯನ್ನು ಬಗೆಹರಿಸಿಕೊಳ್ಳಲು ಎ.ಸಿ. ಕೋರ್ಟ್‌ ನಲ್ಲಿ 2021-22ರಲ್ಲಿ ಮೊಕದ್ದಮೆ ಹೂಡಿದ್ದರು.ಕೋರ್ಟಿನ ಆದೇಶ ಪ್ರತಿ ನೀಡಲು ರೈತನಿಗೆ 15 ಸಾವಿರ ಲಂಚಕ್ಕೆ ಕೇಸ್‌ ವರ್ಕರ್‌ ಕುಮಾರ ನೆಗಳೂರು ಬೇಡಿಕೆ ಇಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದ ಕೋರ್ಟಿನ ಆದೇಶ ಪ್ರತಿಯನ್ನು ಪಡೆಯಲು ಮನವಿ ಮಾಡಿಕೊಂಡಿದ್ದರು,ಲಂಚ ಪಡೆಯುತ್ತಿರುವ ವೇಳೆ ಸೋಮವಾರ ಕುಮಾರ ನೆಗಳೂರು ಎಂಬಾತನನ್ನುಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣ ಕುರಿತು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಪರಿಶೀಲನೆ ಮುಂದುವರಿದಿದೆ.

Related News

spot_img

Revenue Alerts

spot_img

News

spot_img