28.2 C
Bengaluru
Wednesday, July 3, 2024

ಭೂ ಅತಿಕ್ರಮಣ: ನೋಟೀಸ್ ಜಾರಿ ಮಾಡಿದ ವಿಶೇಷ ನ್ಯಾಯಾಲಯ

ಬೆಂಗಳೂರು, ಜು. 17 : ಬಾಣಸವಾಡಿ ಕೆರೆ ಪ್ರದೇಶ ಮತ್ತೆ ಮತ್ತೆ ಒತ್ತುವರಿ ಆಗುತ್ತಿರುವುದನ್ನು ಗಮನಿಸಿ ಈಗ ಸ್ವಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಪ್ರಕರಣವನ್ನು ದಾಖಲಿಸಿಕೊಂಡು ನೋಟೀಸ್ ನೀಡಿದೆ. ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ಗೆ ನೋಟೀಸ್ ಅನ್ನು ಜಾರಿ ಮಾಡಲಾಗಿದೆ. ತೆರವುಗೊಳಿಸಿದರೂ ಮತ್ತೆ ಒತ್ತುವರಿಯಾಗುತ್ತಿರುವ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಕೃಷ್ಣರಾಜಪುರ ಬಾಣಸವಾಡಿ ಸರ್ವೆ.ನಂ. 211ರ 42 ಎಕರೆ 38 ಗುಂಟೆ ಕೆರೆ ಅಂಗಳವು ಮತ್ತೆ ಮತ್ತೆ ಒತ್ತುವರಿಯಾಗುತ್ತಿದೆ. 2015 ಒತ್ತುವರಿ ತೆರವುಗೊಳಿಸಿದ್ದರೂ ಮತ್ತೆ ಆಕ್ರಮಿಸಿಕೊಂಡ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಪುನಃ ತೆರವು ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆದಿತ್ತು. ಆದರೆ, ಇದೀಗ ಮತ್ತೆ ಒತ್ತುವರಿಯಾಗಿದೆ. ಕಟ್ಟಡಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಈ ಬಗ್ಗೆ ಈಗ ಪ್ರಕರಣದ ನೋಟೀಸ್ ಜಾರಿ ಮಾಡಿ ಆಗಸ್ಟ್ 18ರೊಳಗೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೆರೆ ಅಂಗಳದ ಅತಿಕ್ರಮಣದ ಬಗ್ಗೆ, ಅತಿಕ್ರಮಣ ಮಾಡಿದ ವ್ಯಕ್ತಿಗಳು ಸೇರಿದಂತೆ ಪ್ರತಿಯೊಂದು ವಿಚಾರವನ್ನು ವಿಸ್ತೀರ್ಣವಾಗಿ ವರದಿ ನೀಡುವಂತೆ ತಹಶೀಲ್ದಾರ್ ಗೆ ಸೂಚನೆ ನೀಡಲಾಗಿದೆ.

ಇದು ಸರ್ಕಾರದ ಪ್ರದೇಶವಾಗಿದ್ದು, ಯಾರೂ ಅತಿಕ್ರಮ ಮಾಡಿಕೊಳ್ಳಬಾರದೆಂದು ಸೂಚನಾ ಫಲಕವನ್ನು ಹಾಕಿದ್ದರೂ ಕೂಡ ಕೆರೆ ಅಂಗಳ ಒತ್ತುವರಿಯಾಗಿದೆ. ಈ ಕೆರೆಯಲ್ಲಿ ದೇವಸ್ಥಾನಕ್ಕೆಂದು 6.12 ಗುಂಟೆ, ಪೆಟ್ರೋಲ್ ಬಂಕ್ ಹಾಗೂ ಕಟ್ಟಡಕ್ಕಾಗಿ 1 ಎಕರೆ 28.9 ಗುಂಟೆ, ಬಿಡಿಎ ನಿವೇಶನ 12 ಎಕರೆ 33 ಗುಂಟೆ, ರಸ್ತೆ ನಿರ್ಮಾಣಕ್ಕೆ 7 ಎಕರೆ 31 ಗುಂಟೆ ಹಾಗೂ ಚರಂಡಿಗಾಗಿ 24.08 ಗುಂಟೆ ಸೇರಿದಂತೆ ಇತರೆ ಬಳಕೆಗೆ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.

Related News

spot_img

Revenue Alerts

spot_img

News

spot_img