IAS transfer: ಮತ್ತೆ ಐಎಎಸ್‌ ಅಧಿಕಾರಿಗಳ ವರ್ಗಾವಣೆ,

0
231

ಇತ್ತೀಚೆಗೆ ವರ್ಗಾವಣೆಯಾಗಿದ್ದ ಐದು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ,ಸುಷ್ಮಾ ಗೋಡ್ಬೋಲೆ ಅವರನ್ನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಿಇಒ ಆಗಿ ನೇಮಿಸಲಾಗಿದೆ.ರಾಜ್ಯ ಸರ್ಕಾರ ಇಂದು(ಜೂನ್ 28) ಒಟ್ಟು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಅದರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರಾಗಿ ನೇಮಿಸಲಾಗಿದೆ.

ಇನ್ನು ಹಲವು ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಐಎಎಸ್​ ವರ್ಗಾವಣೆ, ಯಾರು ಎಲ್ಲಿಗೆ?

ರಮೇಶ್ .ಡಿಎಸ್ –ತೋಟಗಾರಿಕೆ ಇಲಾಖೆ, ನಿರ್ದೇಶಕರು

ಸತೀಶ ಬಿ.ಸಿ- ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಂಟಿ ನಿರ್ದೇಶಕರು.

ಡಾ.ಗೋಪಾಲ್ ಕೃಷ್ಣ- ಕಾರ್ಮಿಕ ಇಲಾಖೆ , ಬೆಂಗಳೂರು, ಆಯುಕ್ತರು.

ಮೀನಾ ನಾಗರಾಜ್ –ಜಿಲ್ಲಾಧಿಕಾರಿ ಚಿಕ್ಕಮಗಳೂರು

ಡಾ.ಆನಂದ್ ಕೆ- ಸಿಇಒ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್.

ಜಯವಿಭವಸ್ವಾಮಿ-ಮ್ಯಾನೇಜಿಂಗ್ ಡೈರೆಕ್ಟರ್, ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು.

ಪ್ರಭು ಜಿ.-ಸಿಇಒ, ತುಮಕೂರು ಜಿಲ್ಲಾ ಪಂಚಾಯತ್

ನವೀನ್ ರಾಜ್ ಸಿಂಗ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ

ಉಜ್ವಲ್ ಕುಮಾರ್ ಘೋಷ್, ಬಾಗಲಕೋಟೆಯ ಭೂ ಸ್ವಾದಿನ ಇಲಾಖೆ

ಪೊಮ್ಮಲ ಸುನೀಲ್ ಕುಮಾರ್, ಆಯುಕ್ತರು ಎನ್​ಡಿಆರ್​ಎಫ್​

ರವಿಕುಮಾರ್ ಎಂ ಆರ್, ಮೈಸೂರು ಶುಗರ್ ಎಂಡಿ

ಸುಷ್ಮಾ ಗೋಡಬಳೆ, ಮುಖ್ಯ ಮೌಲ್ಯಂಕ ಪ್ರಾಧಿಕಾರದ ಅಧಿಕಾರಿ