ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲವನ್ನು ಸೇವಿಸುವುದರ ಹಿಂದಿನ ಕಾರಣವೇನು..?

0
127
makara sankranthi
makara sankranthi

makara sankranthi : ಬೆಂಗಳೂರು, ಜ. 13 : ಸಂಕ್ರಾಂತಿ ಹಬ್ಬದ ವಿಶೇಷ ತಿನಿಸು ಎಂದರೆ ಎಳ್ಳು, ಬೆಲ್ಲ. ಭಾರತದಲ್ಲಿ ವಿವಿಧ ಹೆಸರಿನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದರೂ ಕೂಡ, ಎಲ್ಲರೂ ಎಳ್ಳು ಮತ್ತು ಬೆಲ್ಲದಿಂದ ಏನಾದರೂ ಒಂದು ಸಿಹಿ ತಿಂಡಿಯನ್ನು ತಯಾರಿಸುತ್ತಾರೆ. ಇದರ ಜೊತೆಗೆ ನಾಲ್ಕು ಮಂದಿಗೆ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಆದರೆ, ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲವನ್ನು ಸೇವಿಸುವುದಕ್ಕೆ ಪ್ರಮುಖ ಕಾರಣವೂ ಇದೆ. ಅದು ಏನೆಂದು ತಿಳಿಯೋಣ ಬನ್ನಿ.

ಎಳ್ಳು ಬೀಜ, ಅಥವಾ ಟಿಲ್, ಈ ಆಹಾರಗಳಲ್ಲಿ ಒಂದಾಗಿದೆ, ಇದನ್ನು ಹಲವಾರು ಚಳಿಗಾಲದ ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಬಿಳಿ ಎಳ್ಳು ತುಂಬಾ ಪೌಷ್ಟಿಕವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದ್ದರೂ, ಚಳಿಗಾಲದ ಭಕ್ಷ್ಯಗಳಲ್ಲಿ ಅವು ಏಕೆ ಇರುತ್ತವೆ ಎಂದು ನಿಮಗೆ ತಿಳಿದಿದೆಯೇ? ಎಳ್ಳು ಅತ್ಯಂತ ಹಳೆಯ ಸಸ್ಯಗಳಲ್ಲಿ ಒಂದಾಗಿದೆ ಮತ್ತು ನಮಗೆ ತಿಳಿದಿರುವ ಅತ್ಯಂತ ಹಳೆಯ ಎಣ್ಣೆಕಾಳುಗಳಲ್ಲಿ ಒಂದಾಗಿದೆ. ಇದು ಭಾರತಕ್ಕೆ ಸ್ಥಳೀಯವಾಗಿದೆ ಮತ್ತು ಇದನ್ನು ಹಲವಾರು ದೇಸಿ ತಯಾರಿಕೆಗಳಲ್ಲಿ ಬಳಸಲಾಗುತ್ತದೆ. ಆದರೆ ಚಳಿಗಾಲವು ಟಿಲ್ ಅಥವಾ ಎಳ್ಳು ಬೀಜಗಳನ್ನು ಸೇವಿಸಲು ಉತ್ತಮ ಸಮಯವಾಗಿದೆ ಏಕೆಂದರೆ ಅವುಗಳು ಉತ್ತಮ ಕೊಬ್ಬಿನಿಂದ ತುಂಬಿರುತ್ತವೆ ಮತ್ತು ಆದ್ದರಿಂದ ನೈಸರ್ಗಿಕವಾಗಿ ಬೆಚ್ಚಗಿರುತ್ತದೆ ಮತ್ತು ಜೀವವನ್ನು ನೀಡುತ್ತದೆ.

ಉತ್ತರಾಯಣ ಕಾಲದಲ್ಲಿ ಸೂರ್ಯನ ಕಿರಣಗಳು ಹೆಚ್ಚು ತೀಕ್ಷ್ಣವಾಗಿರುತ್ತವೆ. ಇದರಿಂದ ದೇಹದಲ್ಲಿ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇನ್ನು ಈ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎಳ್ಳು, ಬೆಲ್ಲ, ಕಡಲೆಬೀಜ ಸಹಕಾರಿಯಾಗಿದೆ. ಎಳ್ಳು ಪ್ರೋಟೀನ್ ಸ್ನಾಯುಗಳ ಕೋಶಗಳನ್ನು ಬಲಪಡಿಸುತ್ತದೆ. ಬೆಲ್ಲ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆ ದೂರಾಗುತ್ತದೆ. ಲಿವರ್‌ ಅನ್ನು ಕ್ಲೆನ್ಸ್‌ ಮಾಡುತ್ತದೆ. ಜೊತೆಗೆ ಸೌಂದರ್ಯ ಹಚ್ಚಿಸುತ್ತದೆ. ಈ ಕಾಲದಲ್ಲಿ ಚಳಿಗೆ ಮೈ ಒಡೆಯುತ್ತದೆ. ಇದಕ್ಕೂ ಎಳ್ಳಿನಲ್ಲಿರುವ ಎಣ್ಣೆ ಅಂಶ ಚರ್ಮವನ್ನು ಒಡೆಯುವುದರಿಂದ ಕಾಪಾಡುತ್ತದೆ.

ಹಾಗಾಗಿಯೇ ಎಳ್ಳನ್ನು ಹಲವು ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಎಳ್ಳು ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಎಳ್ಳು ಬೀಜಗಳಲ್ಲಿ ಮೊನೊ-ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಿವೆ. ಇವೆಲ್ಲಾ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಿ, ಹಲವು ಸಮಸ್ಯೆಗಳನ್ನು ದೂರ ಮಾಡುತ್ತವೆ. ಎಳ್ಳಿನಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುವ ಶಕ್ತಿ ಇದೆ. ಎಳ್ಳಿನ ನಿಯಮಿತ ಸೇವನೆಯು ಕರುಳಿನ ಕ್ಯಾನ್ಸರ್, ಲ್ಯುಕೇಮಿಯಾ, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ತಗುಲದಂತೆ ಕಾಪಾಡುತ್ತದೆ. ಎಳ್ಳಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ.

ಒತ್ತಡವನ್ನು ಎಳ್ಳು ಕಡಿಮೆ ಮಾಡುತ್ತದೆ. ಖಿನ್ನತೆಗೆ ಒಳಗಾಗದಂತೆ ಕಾಪಾಡುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಂ, ಸತು ಮತ್ತು ಸೆಲೆನಿಯಮ್ ಅಂಶಗಳಿವೆ. ಇವು ಎಲ್ಲಾ ಧಾನ್ಯ ಹಾಗೂ ತರಕಾರಿಗಳು ಸಿಗುವುದಿಲ್ಲ. ಎಳ್ಳು ಹೃದಯದ ಸ್ನಾಯುಗಳ ಸಕ್ರಿಯವಾಗಿರಲು ಪ್ರಯೋಜನಕಾರಿಯಾಗಿದೆ. ಇದಲ್ಲಿನ ಕ್ಯಾಲ್ಷಿಯಂ ಅಂಶ ಮೂಳೆಗಳನ್ನು ಬಲಪಡಿಸುತ್ತವೆ. ಚರ್ಮದ ಪೋಷಣೆಗೂ ಸಹಕಾರಿಯಾಗಿದೆ. ಉತ್ತರಾಯಣ ಕಾಲದಲ್ಲಿ ಎಳ್ಳು, ಬೆಲ್ಲ ಹಾಗೂ ಕೊಬ್ಬರಿಯನ್ನು ಸೇವಿಸುವುದು ದೇಹಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಹಾಗಾಗಿ ಹಿಂದಿನ ಕಾಲದಿಂದಲೂ ಯಾವ ಕಾಲದಲ್ಲಿ ಯಾವ ಪದಾರ್ಥಗಳನ್ನು ಸೇವಿಸಬೇಕು ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ.

ಎಳ್ಳು ಬೀಜಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಕ್ಯಾಲ್ಸಿಯಂ ಆರೋಗ್ಯ ಮತ್ತು ಕಾರ್ಯವನ್ನು ಬೆಂಬಲಿಸಲು ಅಗತ್ಯವಾದ ಖನಿಜವಾಗಿದೆ. ಎಳ್ಳು ಬೀಜಗಳು ಬಿ ಜೀವಸತ್ವಗಳ ಉತ್ತಮ ಮೂಲವಾಗಿದೆ. ನಿತ್ಯ ಚಮಚ ಎಳ್ಳನ್ನು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಬಹಳ ಉಪಕಾರಿಯಾಗಿದೆ.