23.7 C
Bengaluru
Saturday, April 19, 2025

ಲಂಚದ ಬಲೆಗೆ ಸಿಕ್ಕಿಬಿದ್ದ ಮೆಸ್ಕಾಂ ಲೈನ್‌ಮ್ಯಾನ್.

ಉಡುಪಿ (ಜು.04) : ಬೈಂದೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೆಸ್ಕಾಂ ಲೈನ್ಮ್ಯಾನ್ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಬೈಂದೂರು ಮೆಸ್ಕಾಂ ಲೈನ್‌ಮ್ಯಾನ್ ರಮೇಶ ಬಡಿಗೇರ ಲೋಕಾಯುಕ್ತ ವಶಕ್ಕೆ ಪಡೆದ ವ್ಯಕ್ತಿ.ಮರ ಕಡಿಯಲು ವಿದ್ಯುತ್ ಲೈನ್ ಕಡಿಯುವಂತೆ ಬೈಂದೂರಿನ ಕುಸುಮಾ ಮನವಿ ಮಾಡಿದ್ದು, ಲೈನ್ ಮ್ಯಾನ್ ರಮೇಶ ಬಡಿಗೇರ 2000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕುಸುಮಾ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್, ಇನ್ಸ್ ಪೆಕ್ಟರ್ ಜಯರಾಮಗೌಡ ತಂಡ ಕಾರ್ಯಾಚರಣೆ ನಡೆಸಿ ಲೈನ್ ಮನ್ ರಮೇಶ ಬಡಿಗೇರ ಅವರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ತಂಡದ ಸದಸ್ಯರಾದ ನಾಗೇಶ್ ಉಡುಪ, ನಾಗರಾಜ್, ಸತೀಶನದಾಡಿ, ಮಲ್ಲಿಕಾ, ರೋಹಿತ್, ರಾಘವೇಂದ್ರ, ಪ್ರಸನ್ನ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸತೀಶ್ ಆಚಾರಿ, ರಾಘವೇಂದ್ರ ಹೊಸಕೋಟೆ, ಸೂರಜ್, ಸುಧೀರ್ ಭಾಗವಹಿಸಿದ್ದರು.

Related News

spot_img

Revenue Alerts

spot_img

News

spot_img