ಬೆಂಗಳೂರು;ರಾಜ್ಯದ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು & ನಿರ್ದೇಶಕರನ್ನು ನೇಮಿಸಲು ಹೈಕಮಾಂಡ್(Highcommand) ಹಸಿರು ನಿಶಾನೆ ನೀಡಿದೆ ಎಂಬ ಮಾಹಿತಿ ಲಭಿಸಿದೆ. ಸದ್ಯ ದೆಹಲಿ(Dehali)ಯಲ್ಲಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ(DCM) ಡಿ.ಕೆ.ಶಿವಕುಮಾರ್ ನಿನ್ನೆ ರಾತ್ರಿ 32 ಶಾಸಕರ ಪಟ್ಟಿ ಸಿದ್ಧಪಡಿಸಿ, 4 ಗಂಟೆ ಚರ್ಚಿಸಿದ್ದಾರೆ. ಈ ವೇಳೆ 3 ಅಥವಾ ಹೆಚ್ಚು ಬಾರಿ ಗೆದ್ದಿರುವವರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. ಪರಾಜಿತ ಶಾಸಕರು, ಟಿಕೆಟ್ ವಂಚಿತರೂ ಸ್ಥಾನ ಪಡೆಯಲು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೆಡಿ ಮಾಡಿರೋ ನಿಗಮ-ಮಂಡಳಿಯ ಅಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಕಳುಹಿಸಿಕೊಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂಬುದಾಗಿ ತಿಳಿದು ಬಂದಿದೆ.32 ಶಾಸಕರ ಹೆಸರು ಫೈನಲ್ ಮಾಡಿರೋ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪಟ್ಟಿಯನ್ನು ಕಾಂಗ್ರೆಸ್(Congress) ಹೈಕಮಾಂಡ್ ಗೆ ರವಾನಿಸಿದ್ದರು. ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ-ಮಂಡಳಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.