#Bengaluru #RI #Lokayukta #Accepting #bribe
ಬೆಂಗಳೂರು;ಲಂಚ ಸ್ವೀಕರಿಸುವ ವೇಳೆ ಬೆಂಗಳೂರಿನ ಮಹದೇವಪುರದ ಆರ್ ಐ(RI) ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ.ಕೃಷಿ ಭೂಮಿ ಒಂದನ್ನು ಖಾತಾ ಪೋಡಿ ಮಾಡಿಕೊಡಲು ಬೆಂಗಳೂರಿನ ಮಹದೇವಪುರದ ಆರ್ ಐ ಒಬ್ಬರು ವ್ಯಕ್ತಿ ಒಬ್ಬರ ಬಳಿ 28 ಲಕ್ಷ ರೂಪಾಯಿಗಳ ಲಂಚದ(Bribe) ಬೇಡಿಕೆ ಇಟ್ಟಿದ್ದರು.ಕೃಷಿ ಭೂಮಿಗೆ ಖಾತಾ ಪೋಡಿ ಮಾಡಿಕೊಡಲು 28 ಲಕ್ಷದ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 3.5 ಲಕ್ಷ ಹಣ 4, ಈಗಾಗಲೇ ಪಡೆದಿದ್ದರು ಎನ್ನಲಾಗಿದೆ.ಘಟನೆಗೆ ಸಂಬಂಧಿಸಿದಂತೆ ನಿನ್ನೆ ಸಂಜೆ 4 ಲಕ್ಷ ಪಡೆಯುವಾಗ ಆರ್ ಐ(RI) ವಸಂತವರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಲೋಕಾಯುಕ್ತ(Lokayukta) ಅಧಿಕಾರಿಗಳು ವಸಂತ ಮನೆಯ ಮೇಲು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ,ವಸಂತ್ ಮನೆಯಲ್ಲಿದ್ದ 9 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.