Revenue Facts

ತಾಳ್ಮೆ ಕಳೆದು ಕೊಂಡ ತುಕಾಲಿ ಸಂತು..!

ತಾಳ್ಮೆ ಕಳೆದು ಕೊಂಡ ತುಕಾಲಿ ಸಂತು..!

ಬಿಗ್​ಬಾಸ್ ಮನೆಯಲ್ಲಿ ಯಾವಾಗ್ಲೂ ಕಾಮಿಡಿ ಮಾಡಿಕೊಂಡು ಹೊಟ್ಟೆ ಉಣ್ಣಾಗೋ ತರಹ ನಗಿಸುತ್ತಿದ್ದ ತುಕಾಲಿ ಸಂತೋಷ್ ಇಂದಿನ ಟಾಸ್ಕ್​ನಲ್ಲಿ ತಾಳ್ಮೆ ಕಳೆದುಕೊಂಡು ಮೈಕೆಲ್​ಗೆ ಪಂಚ್ ಹೊಡೆದಿದ್ದಾರೆ.

ವಿನಯ್ ಕೈ ಬೆರಳು ಮುರಿತಾ..!

ಬಿಗ್ ಬಾಸ್ ಸ್ಪರ್ಧಿಗಳಿಗೆ ಆಗಿದ್ದಿಷ್ಟು ಕೊಳೆ ಒಳ್ಳೆಯದಲ್ಲ ಎಂಬ ಟಾಸ್ಕ್ ನ್ನು ನೀಡಲಾಗಿತ್ತು. ಬಿಗ್ ಬಾಸ್ ಎರಡು ಗುಂಪುಗಳನ್ನಾಗಿ ವಿಂಗಡಿಸಿದ್ರು . ಎದುರಾಳಿ ತಂಡದವರ ಬಟ್ಟೆಗಳನ್ನು ಕೊಳೆ ಮಾಡ ಬೇಕು ಆ ಕೊಳೆ ಮಾಡಿದ ಬಟ್ಟೆಗಳನ್ನು ಒಗೆದು ಮತ್ತೆ ಒಣಗಿಸಿ ಹಾಕಬೇಕು ಇದೇ ಆಟದ ರೂಲ್ಸ್ ಆಗಿತ್ತು. ಬಿಗ್ ಬಾಸ್ ನ ಒಂದು ಬಜರ್ ಆದಾಗ ಯಾರ ಬಟ್ಟೆಗಳು ಕಡಿಮೆ ಕೊಳೆಯಾಗಿರುತ್ತವೆಯೋ ಆ ತಂಡ ಗೆಲ್ಲುತ್ತದೆ . ಇದೇ ತರ ಟಾಸ್ಕ್ ನಡಿಯುವ ವೇಳೆ ಎರಡನೇ ರೌಂಡ್ ನಲ್ಲಿ ಬಹಳಷ್ಟು ರೋಷದಿಂದ ಆಟವಾಡುವ ವೇಳೆ ವಿನಯ್ ಕೈ ಬೆರಳು ಮುರಿದುಕೊಂಡು ಆಟದ ಹೊರಗೆ ಕುಳಿತರು. ಇನ್ನು ಕಾರ್ತಿಕ್ ಪರಿಸ್ಥಿತಿ ಸಹ ಇದೇ ಆಯ್ತು.

ನೀನು ಇಲ್ಲಿ ಆಡಬಹುದು, ನನಗೆ ಆಡಲು ಹೊರಗೆ ಜನರಿದ್ದಾರೆ..!

ಇಬ್ಬರಿಗೆ ಪೆಟ್ಟಾದ ಕಾರಣ ಆಟದಿಂದ ಆಟಗಾರರ ಸಂಖ್ಯೆ ಕಡಿಮೆಯಾಯ್ತು. ಆದ ಕಾರಣ ಬಿಗ್​ಬಾಸ್ ಆಟಗಾರರ ಸಂಖ್ಯೆ ಕಡಿಮೆ ಮಾಡಿದ್ರು. ಆಗ ಎದುರಾಳಿ ತಂಡದ ಬಟ್ಟೆ ಕೊಳೆ ಮಾಡಲು ತುಕಾಲಿ ಸಂತೋಷ್ ಹೋಗಿದ್ದರು. ಅದನ್ನ ರಕ್ಷಿಸಲು ಮೈಕೆಲ್ ಬಂದರು. ಆರಂಭದಲ್ಲಿ ಮೈಕೆಲ್ ತುಕಾಲಿಯನ್ನು ಕೈಗಳಿಂದ ಮುಟ್ಟದೆ ತಳ್ಳಿದರು, ಅವರನ್ನು ಎತ್ತಿಕೊಂಡು ಬಂದು ಮೈದಾನದ ಮಧ್ಯದಲ್ಲಿಟ್ಟರು. ಇದು ತುಕಾಲಿಗೆ ಹಿಡಿಸಲಿಲ್ಲ. ತುಕಾಲಿ ಬಲಶಾಲಿಯಾದ ಮೈಕೆಲ್ ಅನ್ನು ತಳ್ಳಲು ಮೊಣಕೈ ಬಳಸಿದರು. ಇದರಿಂದ ಸಿಟ್ಟಾದ ಮೈಕೆಲ್, ನನಗೂ ಕೈ ಬಳಸಲು ಬರುತ್ತದೆ ಎಂದು ಮೂರು ಬಾರಿ ತುಸು ಜೋರಾಗಿ ತುಕಾಲಿಯನ್ನು ತಳ್ಳಿದರು. ಇದರಿಂದ ಸಿಟ್ಟಾದ ಮೈಕೆಲ್, ‘ನೀನು ಇಲ್ಲಿ ಆಡಬಹುದು, ನನಗೆ ಆಡಲು ಹೊರಗೆ ಜನರಿದ್ದಾರೆ’ ಎಂದು ಬೆದರಿಕೆ ಹಾಕಿದರು. ಮಾತು ಮಾತು ಹೆಚ್ಚಾಗಿ ಮುಷ್ಟಿಯಲ್ಲಿ ಮೈಖಲ್ ಎದೆಗೆ ಪಂಚ್ ಮಾಡಿದ್ರು.

ತುಕಾಲಿ ಹೊಡೆದಿದ್ದನ್ನು ಮೈಕೆಲ್ ಗಂಭೀರವಾಗಿ ಪರಿಗಣಿಸಿದ್ರಾ..

ಅಲ್ಲಿಯೇ ಇದ್ದ ಉಸ್ತುವಾರಿ ಸಿರಿ ಅವರು ಇಬ್ಬರನ್ನೂ ತಡೆದು ಎರಡು ನಿಮಿಷಗಳ ಕಾಲ ಇಬ್ಬರನ್ನೂ ಆಟದಿಂದ ಹೊರಗಿಟ್ಟರು. ತುಕಾಲಿ ಹೊಡೆದಿದ್ದನ್ನು ಮೈಕೆಲ್ ಗಂಭೀರವಾಗಿ ಪರಿಗಣಿಸಲಿಲ್ಲವಾದ್ದರಿಂದ ಆಟ ಹಾಗೆಯೇ ಮುಂದುವರೆಯಿತು. ಆ ಟಾಸ್ಕ್​ನಲ್ಲಿ ತುಕಾಲಿ ತಂಡದವರು ಸೋಲು, ಮೈಕೆಲ್ ತಂಡದವರು ಗೆದ್ದರು. ಇದರಿಂದ ಬೇಸರಗೊಂಡ ತುಕಾಲಿ, ಸಿರಿ ಅವರ ಉಸ್ತುವಾರಿ ಸರಿಯಿಲ್ಲವೆಂದು ತುಕಾಲಿ ಬೇಸರಗೊಂಡರು.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Exit mobile version