Revenue Facts

ಕೇತುಗ್ರಸ್ತ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಅಶುಭ ಮತ್ತು ಪರಿಹಾರ ಮಾರ್ಗ!

ಕೇತುಗ್ರಸ್ತ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಅಶುಭ ಮತ್ತು ಪರಿಹಾರ ಮಾರ್ಗ!

ಅಕ್ಟೋಬರ್ 25 ಖಗ್ರಾಸ ಕೇತುಗ್ರಸ್ತ ಸೂರ್ಯಗ್ರಹಣವಿದೆ. ಸ್ವಾತಿ ನಕ್ಷತ್ರ ಮತ್ತು ತುಲಾ ರಾಷಿಯಲ್ಲಿ ನಡೆಯುವ ಈ ಕೇತುಗ್ರಸ್ತ ಸೂರ್ಯಗ್ರಹಣದ ಪ್ರಭಾವ, ಪರಿಹಾರ, ಗ್ರಹಣದಿಂದ ಯಾವ ರಾಶಿಯವರಿಗೆ ಏನು ಫಲ ? ಈ ಗ್ರಹಣದಿಂದ ಪ್ರಕೃತಿ ಮೇಲೆ ಆಗುವ ಪರಿಣಾಮ ಕುರಿತು ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಅವರು ರೆವಿನ್ಯೂಫ್ಯಾಕ್ಟ್‌ ಗೆ ಸಮಗ್ರ ಚಿತ್ರಣ ನೀಡಿದ್ದಾರೆ.

ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರು ಮುದ್ರ ಬ್ರಹ್ಮ ಹಾಗೂ ಮುದ್ರ ರತ್ನ , ಮುದ್ರ ಶಿರೋಮಣಿ ಎಂದೇ ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದಾರೆ. ಎಂಎಸ್ ಕಂಪ್ಯೂಟರ್‌ ಸೈನ್ಸ್ ಓದಿರುವ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಖಾಸಗಿ ವಾಹಿನಿಯಲ್ಲಿ ಮುದ್ರ ಮತ್ತು ಮಂತ್ರದ ಬಗ್ಗೆ ವಿವರ ನೀಡುತ್ತಾರೆ. ಅ. 25 ರಂದು ಅಮಾವಾಸೆ. ಅವತ್ತೇ ಸೂರ್ಯ ಗ್ರಹಣವಿದೆ. ಸ್ವಾತಿ ನಕ್ಷತ್ರ ತುಲಾ ರಾಷಿಯಲ್ಲಿ ನಡೆಯುವ ಪಾರ್ಶ್ವ ಸೂರ್ಯಗ್ರಹಣ, ಅದರಿಂದ ಆಗುವ ಪರಿಣಾಮದ ಬಗ್ಗೆ ಲಕ್ಷ್ಮೀ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ.

ಗ್ರಹಣ ಕಾಲ :
ಗ್ರಹಣ ಸ್ಪರ್ಶಕಾಲ ಹಗಲು :— 2:28 P.M. (14:28 I.S.T)
ಗ್ರಹಣ ಮಧ್ಯಕಾಲ ಹಗಲು :— 4:30 P.M. ( 16:30 I.ST)
ಗ್ರಹಣ ಮೋಕ್ಷಕಾಲ ಸಂಜೆ:— 6:32 P.M. (18:32 I.S.T )

ಗ್ರಹಣವು ಕರ್ನಾಟಕ ಮತ್ತು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಗ್ರಹಣದ ಮೋಕ್ಷವು ಸೂರ್ಯಾಸ್ತದ ನಂತರ ಅಗುವುದರಿಂದ ಗ್ರಹಣದ ಮೋಕ್ಷವು ಕಾಣಿಸುವುದಿಲ್ಲ. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು, ಗರ್ಭಿಣಿಯರು, ಬಾಣಂತಿಯರು ಅ. 25 ರಂದು ಮಂಗಳವಾರ ಹಗಲು 12:00 ಘಂಟೆಯವರೆಗೆ ಆಹಾರ ಸೇವಿಸಬಹುದು. ಗ್ರಹಣಾಚರಣೆ ಮಾಡುವ ಎಲ್ಲರೂ ಗ್ರಹಣ ಸ್ಪರ್ಶ ಕಾಲದಲ್ಲೂ ಹಾಗೂ ಮೋಕ್ಷವಾದ ನಂತರ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡುವುದು ಒಳ್ಳೆಯದು.
ಅಮಾವಾಸೆ ದಿನ ಸೂರ್ಯಗ್ರಹಣ ಬರುವುದು ಸಹಜ.

ಪಕ್ಕದ ಜಮೀನಿನ ವ್ಯಕ್ತಿ ನಿಮ್ಮ ಜಮೀನಿಗೆ ದಾರಿ ಬಿಡುತ್ತಿಲ್ಲವೇ? ಕಾನೂನು ಮಾರ್ಗ ತಿಳಿಯಿರಿ

ಚಂದ್ರಗ್ರಹಣ ಹುಣ್ಣಿಮೆ ದಿನ ಬರುತ್ತದೆ. ಸೂರ್ಯ ಗ್ರಹಣ ಅಮಾವಾಸೆ ದಿನ ಬರುತ್ತದೆ. ಗ್ರಹಣದ ಬಗ್ಗೆ ತಪ್ಪು ಕಲ್ಪನೆ ಇದೆ. ಗ್ರಹಣ ಕೆಟ್ಟದ್ದು ಅಲ್ಲ. ಅದು ಒಳ್ಳೆಯದು. ಗ್ರಹಣ ಒಂದು ಕ್ಲೀನಿಂಗ್ ಪ್ರೊಸೆಸ್. ಪ್ರಕೃತಿಯನ್ನು ಸ್ವಚ್ಛಗೊಳಿಸುತ್ತದೆ. ವಸ್ತುಗಳ ಮೇಲೆ ಪ್ರಭಾವ ಬೀರುತ್ತದೆ. ಮನುಷ್ಯನ ಆತ್ಮ, ಶರೀರ ಹಾಗೂ ಮನಸನ್ನು ಕ್ಲೀನ್ ಮಾಡುತ್ತದೆ. ಪ್ರಕೃತಿ ವಿಚಾರದಲ್ಲಿ ಬಂಡೆ, ಬೆಟ್ಟ, ಮಣ್ಣು, ಮರ ಗಿಡಗಳ ಮೇಲೆ ಪ್ರಭಾವ ಬೀರಿ ಪ್ರಕೃತಿಯನ್ನು ಸ್ವಚ್ಛಗೊಳಿಸುತ್ತದೆ ಎಂದು ತಿಳಿಸಿದ್ದಾರೆ ಲಕ್ಷ್ಮೀ ಶ್ರೀನಿವಾಸ ಗುರೂಜಿ.

ಸ್ವಾತಿ ನಕ್ಷತ್ರ ಮತ್ತು ತುಲಾ ರಾಶಿಯಲ್ಲಿ ನಡೆಯುವ ಈ ಪಾರ್ಶು ಸೂರ್ಯ ಗ್ರಹಣದಿಂದ ಈ ವರ್ಷದ ಅಂತ್ಯದ ವರೆಗೂ ಅತಿ ಹೆಚ್ಚು ಮಳೆ ಆಗುತ್ತದೆ. ಜಲ ಪ್ರಳಯ ಆಗಬಹುದು. ಇನ್ನೂ ವಿಫರೀತ ಮಳೆ ಆಗುತ್ತದೆ. ಈ ಗ್ರಹಣ ಮುನಷ್ಯನ ಮೇಲೆ ಗ್ರಹಣವಾದ 48 ದಿನಗಳ ನಂತರ ಪ್ರಭಾವ ಬೀಳಬಹುದು. ಪ್ರಕೃತಿ ಮೇಲೆ ಏಳು ದಿನಗಳ ನಂತರ ಪ್ರಭಾವ ಬೀರುತ್ತದೆ. ಗರ್ಭಿಣಿ ಸ್ತ್ರಿಯರು, ಮುದುಕರು, ಹೊರಗೆ ಬರುವ ಹಾಗಿಲ್ಲ. ಅಂಗವಿಕಲರಿಗೆ ತೊಂದರೆ ಆಗುತ್ತದೆ. ಏಳು ವರ್ಷದ ಒಳಗಿನ ಮಕ್ಕಳಿಗೆ ಅಂಗವಿಕಲತೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ರಹಣದ ಕಾಲದಲ್ಲಿ ಎಚ್ಚರಿಕೆ ವಹಿಸಬೇಕು.

ನಿಮ್ಮ ಆರೋಗ್ಯ, ಸಂಪತ್ತು, ಆಧ್ಯಾತ್ಮದ ಗುಟ್ಟು ಈಶಾನ್ಯ ಧಿಕ್ಕು!

ಈ ಸೂರ್ಯಗ್ರಹಣ ಕೇತುಗ್ರಹವಾಗಿರುವುದಿಂದ ಕೆಲವು ರಾಶಿಯವರಿಗೆ ಶುಭ ಮತ್ತು ಇನ್ನೂ ಕೆಲವರಿಗೆ ಅಶುಭ ಫಲಗಳಿವೆ. ಗ್ರಹಣದ ಸಮಯದಲ್ಲಿ ಬಲಗೈನಲ್ಲಿ ಗೋದಿ ಹಾಗೂ ಎರಡಗೈನಲ್ಲಿ ಉರುಳಿ ಕಾಳು ಇಟ್ಟುಕೊಂಡು ಪ್ರಾರ್ಥನೆ, ಜಪ ಮಾಡಿದರೆ ಅಶುಭ ಇರುವರಿಗೆ ಒಳಿತಾಗುತ್ತದೆ.

ಅಶುಭ ಯಾವ ರಾಶಿಯವರಿಗೆ:
ಚಿತ್ತ,ಸ್ವಾತಿ,ನಕ್ಷತ್ರ ಮತ್ತು ಕನ್ಯಾ,ತುಲಾ,ಮೇಷ,ಮೀನ,ಸಿಂಹ, ರಾಶಿಯವರಿಗೆ ಗ್ರಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ದೋಷ ಕಾರಿ ಯಾಗಿದೆ ಎನ್ನುತ್ತಾರೆ ಗುರೂಜಿ.

ಗ್ರಹಣ ಪರಿಹಾರ:
ಹೆಸರುಕಾಳು, ಅವರೆಕಾಳು, ಗೋದಿ, ತೊಗರಿಕಾಳು, ಧಾನ್ಯಗಳ ಮೇಲೆ ನಿಮ್ಮ ಕೈಲಾದಷ್ಟು ದಕ್ಷಿಣೆಯನ್ನುಇಟ್ಟು ಕೆಳಗೆ ಕೊಟ್ಟಿರುವ ಈ ಶ್ಲೋಕಗಳನ್ನು ಹೇಳಿಕೊಂಡು ಒಂದು ಕಾಗದದ ಮೇಲೆ ಬರೆದು ಧಾನ್ಯದ ಮೇಲೆ ಇಟ್ಟು ಪೂಜಿಸಿ ಬ್ರಾಹ್ಮಣ ಯತಿಗಳಿಗೆ ಅಥವಾ ಹತ್ತಿರವಿರುವ ದೇವಾಲಯಗಳ ಅರ್ಚಕರಿಗೆ ಕೊಡುವುದರಿಂದ ದೋಷ ಪರಿಹಾರ ಆಗುತ್ತದೆ.

ಶ್ಲೋ– ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಯೋ ಸೌ ದಂಡಧರೋದೇವಃ ಯಮೋಮಹಿಷವಾಹನಃ |
ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |.
(ಅಥವಾ ನವಗ್ರಹ ಹವನ ಮಾಡಿಸಿಕೊಳ್ಳತಕ್ಕದ್ದು)

Exit mobile version