Revenue Facts

ನಾಳೆ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ

ನವದೆಹಲಿ; ವಿಶ್ವಕರ್ಮ ಜಯಂತಿ ದಿನವಾದ ಸೆ.17ರಂದು ಪ್ರಧಾನಿ ಮೋದಿ ಕುಶಲಕರ್ಮಿಗಳು &ಸಂಪ್ರದಾಯಿಕ ಕುಶಲ ಕಲೆಗಳ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಸಹಾಯ ಮಾಡುವ PM ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸೆ.17ರಂದು ಮೋದಿ ಜನ್ಮದಿನ ಕೂಡ. ಸ್ವಾತಂತ್ರ್ಯ ದಿನಾಚರಣೆಯಂದು ಈ ಯೋಜನೆ ಘೋಷಣೆಯಾಗಿದ್ದು ಅದಕ್ಕೆ 13,000ಕೋಟಿ ರೂ. ಖರ್ಚಾಗಲಿದೆ. ಕೇಂದ್ರ ಸರ್ಕಾರವೇ ಈ ಯೋಜನೆ ಸಂಪೂರ್ಣ ವೆಚ್ಚ ಭರಿಸಲಿದೆ. ಮೊದಲ ಕಂತಿನಲ್ಲಿ 15,000ರೂ. ಪ್ರೋತ್ಸಾಹಧನ, 1ಲಕ್ಷ ರೂ.ವರೆಗೆ ಅಡಮಾನ ಇಲ್ಲದ ಸಾಲ ದೊರೆಯುತ್ತದೆ.30 ಲಕ್ಷ ಕುಶಲ ಕರ್ಮಿಗಳಿಗೆ ಶೇ.5 ರಷ್ಟು ಅಗ್ಗದ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ನೆರವು ನೀಡುವ 13 ಸಾವಿರ ಕೋಟಿ ರೂ. ಮೊತ್ತದ ವಿಶ್ವಕರ್ಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ,ಯೋಜನೆಯಡಿಯಲ್ಲಿ, ಶೇ. 5 ರಷ್ಟು ರಿಯಾಯಿತಿ ಬಡ್ಡಿದರದೊಂದಿಗೆ ಈ ಜನರಿಗೆ ರೂ 1 ಲಕ್ಷ (First installment) ಮತ್ತು ರೂ 2 ಲಕ್ಷ (second instalment) ವರೆಗೆ ಸಾಲದ ಸಹಾಯವನ್ನು ನೀಡಲಾಗುತ್ತಿದೆ.ನೇಕಾರರು, ಅಕ್ಕಸಾಲಿಗರು, ಅಕ್ಕಸಾಲಿಗರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮುಂತಾದವರು ಈ ವಿಶ್ವಕರ್ಮ ಯೋಜನೆಯಡಿ ಪ್ರಯೋಜನ ಪಡೆಯಬಹುದು. ಅವರ ಕುಟುಂಬಗಳಿಗೆ ಸುಲಭವಾಗಿ ಸಾಲ ಸಿಗುತ್ತದೆ.

ದಿನವೊಂದಕ್ಕೆ 500 ರೂ.ಗಳ ವಿದ್ಯಾರ್ಥಿ ವೇತನದೊಂದಿಗೆ ಫಲಾನುಭವಿಗಳಿಗೆ ಮೂಲಭೂತ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಯೋಜನೆಯಡಿಯಲ್ಲಿ, ಫಲಾನುಭವಿಗಳಿಗೆ 15,000 ರೂಗಳ ಟೂಲ್ಕಿಟ್(Toolkit) ಪ್ರೋತ್ಸಾಹಕವನ್ನು ನೀಡಲಾಗುತ್ತದೆ. ಇದರೊಂದಿಗೆ ದಿನವೊಂದಕ್ಕೆ 500 ರೂ.ಗಳ ವಿದ್ಯಾರ್ಥಿ ವೇತನದೊಂದಿಗೆ ಫಲಾನುಭವಿಗಳಿಗೆ ಮೂಲಭೂತ ಕೌಶಲ್ಯ ತರಬೇತಿಯನ್ನು ನೀಡಲಾಗುವುದು.

Exit mobile version