Revenue Facts

ಅಮಾನತುಗೊಂಡ ಸಂಸದರಿಗೆ ಲೋಕಸಭೆ ನೋಟಿಸ್ ಜಾರಿ…!

ಅಮಾನತುಗೊಂಡ ಸಂಸದರಿಗೆ  ಲೋಕಸಭೆ   ನೋಟಿಸ್ ಜಾರಿ…!

ನವದೆಹಲಿ: ಸಂಸತ್ತಿನದಲ್ಲಿ ನಡೆದ ಚಳಿಗಾಲದ ಅಧಿವೇಶನದಿಂದ ಅಮಾನತುಗೊಂಡ ಸಂಸದರಿಗೆ ಲೋಕಸಭೆ ಸೆಕ್ರೆಟರಿಯೇಟ್ ನೋಟಿಸ್ ಜಾರಿ ಮಾಡಿದೆ. ರಾಜ್ಯ ಸಭೆ ಮತ್ತು ಲೋಕಸಭೆಯಿಂದ ೧೪೧ ಅಮಾನತ್ತು ಮಾಡಲಾಗಿದ್ದು, ಸಂಸತ್ತಿನ ಲಾಬಿ , ಗ್ಯಾಲರಿ ಹಾಗು ಚೇಂಬರ್ ನನ್ನು ಪ್ರವೇಶ ಮಾಡಬಾರದೆಂದು ಲೋಕಸಭೆಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಸಂಸತ್ತಿ ಮೊಗಸಾಲೆಗೆ ಸದಸ್ಯರಿಗೆ ನಿಷೇಧ..!

ಭಾರತದ ಸಂಸತ್​ ಭವನದಲ್ಲಿದಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದ ಮಧ್ಯೆ ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪ ಕುರಿತು ಚರ್ಚೆಗೆ ಒತ್ತಾಯಿಸಿ ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ವಿವಿಧ ಪಕ್ಷಗಳ ಸದಸ್ಯರನ್ನು ಉಭಯ ಸದನಗಳಿಂದ ಅಮಾನತುಗೊಳಿಸಲಾಗಿತ್ತು. ಈ ನಂತರ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಅಮಾನತುಗೊಂಡ ಎಲ್ಲ ಸಂಸದರು ಈ ಅವಧಿಯಲ್ಲಿ ಸಂಸತ್ತಿ ಮೊಗಸಾಲೆ, ಗ್ಯಾಲರಿ ಮತ್ತು ಕೋಣೆಗಳಿಗೆ ಪ್ರವೇಶಿಸಬಾರದೆಂದ ಹೇಳಿದೆ.

ದೈನಂದಿನ ವೇತನದ ಭತ್ಯೆಗೆ ಅರ್ಹರಾಗಿರುವುದಿಲ್ಲ ..!

ಈ ನಂತರ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಿದ್ದ ವಿವಿಧ ಪಕ್ಷಗಳ ಸದಸ್ಯರನ್ನು ಸಂಸದೀಯ ಸಮಿತಿಯ ಸಭೆಗೆ ಹಾಜರಾಗಲು ಅವರಿಗೆ ಅವಕಾಶವಿರಲ್ಲ. ಅಮಾನತು ಅವಧಿಯಲ್ಲಿ ಅವರು ಯಾವುದೇ ಸೂಚನೆ ನೀಡುವಂತಿಲ್ಲ. ತಮ್ಮ ಅಮಾನತು ಅವಧಿಯಲ್ಲಿ ನಡೆದ ಸಮಿತಿಗಳಿಗೆ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಅಧಿವೇಶನದ ಉಳಿದ ಅವಧಿಗೆ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಿದರೆ, ಅವರು ಅಮಾನತು ಅವಧಿಯಲ್ಲಿ ದೈನಂದಿನ ವೇತನದ ಭತ್ಯೆಗೆ ಅರ್ಹರಾಗಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಂಸತ್ತು ಸಂವಿಧಾನದ ಸ್ಮಶಾನ..!

ಸಂತ್ತಿನ ಮೇಲೆ ಕೋಪ ಗೊಂಡು ಸದಸ್ಯರು ವಿರೋಧ ಪಕ್ಷದ ಶಾಸಕರು ಸಂಸತ್ತನ್ನು ಸಂವಿಧಾನದ ಸ್ಮಶಾನ ಎಂದು ಕರೆದರು ಮತ್ತು ಅದನ್ನು ಉತ್ತರ ಕೊರಿಯಾದ ಅಸೆಂಬ್ಲಿಯೊಂದಿಗೆ ಹೋಲಿಸಿದರು.ಇದೇ ವೇಳೆ, 141 ಸಂಸದರ ಅಮಾನತು ವಿರೋಧಿಸಿ ಡಿ.22ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Exit mobile version