ಬೆಂಗಳೂರು, ಏ. 04 : ರಾಜೀವ್ ಗಾಂಧಿ ನಿಗಮದ ವತಿಯಿಂದ ಒಂದು ಲಕ್ಷ ಬಹುಮಹಡಿಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ವಸತಿ ಇಲ್ಲದ ಒಂದು ಲಕ್ಷ ಬಡವರಿಗೆ ಮನೆಯನ್ನು ನಿರ್ಮಿಸಿಕೊಡುವುದೇ ಸರ್ಕಾರದ ಉದ್ದೇಶ. ಸರ್ಕಾರ ಬಡವರಿಗಾಗಿ ಸಾಕಷ್ಟು ವಸತಿ ಯೋಜನೆಗಳನ್ನು ಕೈಗೊಂಡಿದೆ. ವಸತಿ ಯೋಜನೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಾಕಷ್ಟು ಮಂದಿ ಅರ್ಜಿಯನ್ನು ಕೂಡ ಸಲ್ಲಿಸಿದ್ದು, ಫಲಾನುಭವಿಗಳು ಈಗ ತಮ್ಮ ಠೇವಣಿಯನ್ನು ವಾಪಸ್ ಕೇಳುತ್ತಿದ್ದಾರೆ.
ಇದರಲ್ಲಿ ಅರ್ಜಿಸಲ್ಲಿಸಿದ ಮೊದಲ ಠೇವಣಿ ಮಾಡಿದವರ ಪೈಕಿ 448 ಮಂದಿ ನಾನಾ ಕಾರಣಗಳನ್ನು ನೀಡಿ ತಮ್ಮ ಹಣವನ್ನು ವಾಪಸ್ ಕೇಳಿದ್ದಾರೆ. ಇದೀಗ ಈ ಹಣವನ್ನು 279 ಮಂದಿಗೆ ವಾಪಸ್ ನೀಡಲಾಗಿದೆ. ವಸತಿ ಇಲಾಖೆ ನಿರ್ಮಾಣ ಮಾಡಿರುವ ಒಂದು ಲಕ್ಷ ಮನೆಗಳ ಖರೀದಿಗೆ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ 50,457 ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರ ಪೈಕಿ 11,838 ಮಂದಿ ಫಲಾನುಭವಿಗಳು ಆಯ್ಕೆ ಆಗಿದ್ದಾರೆ. ಇವರೆಲ್ಲಾ 50 ಸಾವಿರ ರೂ. ಪ್ರಾರಂಭಿಕ ಠೇವಣಿಯನ್ನೂ ಪಾವತಿ ಮಾಡಿದ್ದಾರೆ. ಇದರಲ್ಲಿ ಪೈಕಿ 448 ಮಂದಿ ಮನೆ ಬೇಡವೆಂದು ಹೇಳಿದ್ದು, ಪ್ರಾರಂಭೀಖ ಠೇವಣಿ ಅನ್ನು ವಾಪಸ್ ಕೇಳಿದ್ದಾರೆ.
ಇವರಲ್ಲಿ 279 ಫಲಾನುಭವಿಗಳು ಹಣ ಹಿಂಪಡೆಯುತ್ತಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಹಾಗಾಗಿ ಇವರಿಗೆ ಠೇವಣಿ ಅನ್ನು ವಾಪಸ್ ನೀಡಲಾಗಿದೆ. ಇನ್ನು ಫಲಾನುಭವಿಗಳು ಪಾವತಿಸಿದ್ದ ಒಟ್ಟು 2.47 ಕೋಟಿ ರೂ.ಗಳನ್ನು ವಾಪಸ್ ನೀಡಲಾಗಿದೆ. ಇನ್ನುಳಿದ 169 ಜನ ಸೂಕ್ತ ಕಾರಣಗಳನ್ನು ನೀಡಿಲ್ಲ. ಹೀಗಾಗಿ ಇವರ ಠೇವಣಿಯನ್ನು ಇನ್ನೂ ವಾಪಸ್ ಮಾಡಿಲ್ಲ. ಹೆಚ್ಚು ಮಂದಿ ಆನ್ ಲೈನ್ ಮೂಲಕ ಮನೆಯನ್ನು ನೋಡಿ ಪ್ರಾರಂಭಿಕ ಠೇವಣಿಯನ್ನು ಮಾಡಿದ್ದಾರೆ. ನಂತರ ಮನೆಯನ್ನು ನೋಡಿ ನಾನಾ ಕಾರಣಗಳನ್ನು ನೀಡಿ ಹಣ ವಾಪಸ್ ಪಡೆದಿದ್ದಾರೆ.
ವಸತಿ ಸಮುಚ್ಚಯ ನಗರದ ಹೊರವಲಯದಲ್ಲಿದೆ. ಬಸ್ ವ್ಯವಸ್ಥೆ, ಮೆಟ್ರೊ ಸಂಪರ್ಕವಿಲ್ಲ ಸರಿಯಾಗಿಲ್ಲ. ನೀರು ಮತ್ತು ಬೆಳಕಿನ ಸಮಸ್ಯೆ ಇದೆ. ಕೊಳಚೆ ಪ್ರದೇಶದಲ್ಲಿದೆ ವಸತಿ ನಿರ್ಮಾಣ ಮಾಡಲಾಗಿದೆ. ಹೀಗೆ ನಾನಾ ಕಾರಣಗಳನ್ನು ನೀಡಿದ್ದಾರೆ. ಮನೆ ಚಿಕ್ಕದು, ನಮ್ಮ ಮನೆಯಲ್ಲಿ ನಾಲ್ಕು ಜನ ಇದ್ದೇವೆ ಇದರಲ್ಲಿ ವಾಸ ಮಾಡಲು ಆಗುವುದಿಲ್ಲ ಎಂದು ಕೆಲವರು ಹೇಳಿದ್ದಾರೆ.
